-ಬರಗೂರು ರಾಮಚಂದ್ರಪ್ಪ ನಿರಾಶೆಯಲ್ಲೂ ನಿರೀಕ್ಷೆ ಇಟ್ಟುಕೊಳ್ಳದೆ ಹೋದರೆ ಹತಾಶೆಗೆ ತಲುಪುತ್ತೇವೆಂಬ ಎಚ್ಚರದಲ್ಲೇ ಆಶಾವಾದದ ಬೇರುಗಳಿಗೆ ನೀರೆರೆದುಕೊಂಡು ಬಂದವನು ನಾನು. ಹೀಗಾಗಿ ನಾವು ತಡೆಯಲಾಗದ ಕ್ಯಾಲೆಂಡರ್ ಹೊಸ ವರ್ಷವು ಹನ್ನೆರಡು ತಿಂಗಳಿಗೊಮ್ಮೆ ಬರುವ ಯಾಂತ್ರಿಕ ತಿರುವಿನಲ್ಲೂ ತಾತ್ವಿಕ ತಿರುವೊಂದು ಬಂದೀತೇನೋ ಎಂದು ನಾನು ನಿರೀಕ್ಷಿಸುತ್ತೇನೆ. ನಿರೀಕ್ಷೆಗಳೆಲ್ಲ ನಿಜವೇ ಆಗುತ್ತವೆಯೆಂಬ ನಂಬಿಕೆ ಇಲ್ಲದಿರಬಹುದು. ಆದರೆ, ನಿರೀಕ್ಷೆ ಮತ್ತು ನಂಬಿಕೆಗಳಿಗೆ ನೀರುಣಿಸಿ ಬದುಕಿಸಿಕೊಳ್ಳದಿದ್ದರೆ ನಾವು ಬದುಕುವುದೇ ಕಷ್ಟವಾಗಬಹುದು. ಆದ್ದರಿಂದ ಇಲ್ಲೀವರೆಗೆ ಎದುರಾದ ದುಷ್ಟ ದಿನಗಳು ಮತ್ತೆ ಬಾರದೇ ಇರಲಿ ಎಂದು ನಿರೀಕ್ಷಿಸುವುದು, […]
-ಡಾ.ಉದಯ ಶಂಕರ ಪುರಾಣಿಕ ಕೋವಿಡ್-19ನಿಂದಾಗಿ ವಿಶ್ವಾದ್ಯಂತ ಉಂಟಾಗುತ್ತಿರುವ ಬದಲಾವಣೆಗಳ ಪರಿಣಾಮವನ್ನು ಗಮನಿಸಿದಾಗ, 2021 ಹೇಗಿರಬಹುದು ಎನ್ನುವ ಪ್ರಶ್ನೆ ಸಹಜ. ಕೋವಿಡ್-19 ಸೋಂಕು ತಗುಲದಂತೆ ಅಥವಾ ಸೋಂಕಿತರು ಗುಣವಾಗುವಂತೆ ಮಾಡುವ ಲಸಿಕೆಗಳು 2021ರಲ್ಲಿ ಲಭ್ಯವಾಗಬಹುದು ಎನ್ನುವ ನಿರೀಕ್ಷೆ ಇದೆ. ಆದರೆ ಇಂತಹ ಲಸಿಕೆಯನ್ನು ನೂರಾರು ಕೋಟಿ ಸಂಖ್ಯೆಯಲ್ಲಿ ಉತ್ಪಾದಿಸುವುದು, ಅಗತ್ಯ ತಾಪಮಾನದಲ್ಲಿ ಸಂಗ್ರಹಿಸಿಡುವುದು ಮತ್ತು ವಿವಿಧ ದೇಶಗಳಿಗೆ ವಿತರಿಸುವುದು ಹಾಗೂ ನೂರಾರು ಕೋಟಿ ಜನರಿಗೆ ನೀಡುವುದು-ಇದಕ್ಕೆ ಬೇಕಾಗುವ ಹಣ ಮತ್ತು ಸಮಯವನ್ನು ಪರಿಗಣಿಸಿದರೆ, 2021ರಲ್ಲಿ ಎಲ್ಲರಿಗೂ ಈ ಲಸಿಕೆ […]
-ಎಚ್.ಡುಂಡಿರಾಜ್ ಹೊಸ ಇಸವಿ ಸವಿ ಸವಿಯಾಗಿರಲಿ ಎಂಬುದು ಪ್ರತಿ ವರ್ಷವೂ ಹೊಸ ವರ್ಷ ಬಂದಾಗ ನಾನು ಬಂಧು ಮಿತ್ರರಿಗೆ ಕಳುಹಿಸುವ ಹಳೆಯ ಸಂದೇಶ. ಸಾಮಾನ್ಯವಾಗಿ ಎಲ್ಲಾ ವರ್ಷಗಳಲ್ಲೂ ಸಿಹಿ ಕಹಿಗಳ ಹದವಾದ ಮಿಶ್ರಣ ಇರುತ್ತಿತ್ತು. ಕಳೆದ ವರ್ಷ ಮಾತ್ರ ನನ್ನ ಸಂದೇಶ ಸಂಪೂರ್ಣವಾಗಿ ಹುಸಿಯಾಯಿತು. ಕೊರೊನಾ ವರ್ಷವಿಡೀ ಎಲ್ಲರಿಗೂ ಬರೀ ಕಹಿಯನ್ನೇ ಉಣಿಸಿತು. ಗತ ವರ್ಷವನ್ನು ಎರಡು ಸಾವಿರದ ಇಪ್ಪತ್ತು ಅನ್ನುವುದಕ್ಕಿಂತ ‘ಎಡರು ಸಾವಿನ ವಿಪತ್ತು’ ಅನ್ನುವುದೇ ಸೂಕ್ತ. ಕೊರೊನಾ ನಮ್ಮ ಜೀವನ ಶೈಲಿಯನ್ನೇ ಬದಲಿಸಿತು. ಅಮೆರಿಕ, […]
-ಪ್ರೊ.ಕಾಳೇಗೌಡ ನಾಗವಾರ ಯಾವುದೇ ಸಂವೇದನಾಶೀಲ ವ್ಯಕ್ತಿಯ ಹದಿಹರೆಯದ ದಿನಗಳಲ್ಲಿ ಆಳವಾಗಿ ತನ್ನಂತರಂಗದಲ್ಲಿ ತುಂಬಿಕೊಂಡ ಆದರ್ಶಗಳು ಇಡೀ ಬದುಕಿನ ಉದ್ದಕ್ಕೂ ಜೀವಂತವಾಗಿದ್ದು ಎಚ್ಚರಿಸುತ್ತಿರುವ ಸಾಧ್ಯತೆಗಳು ಸಾಕಷ್ಟಿವೆ. ಈ ಎಚ್ಚರವು ನಮ್ಮನ್ನು ಸೂಕ್ಷ್ಮವೂ, ಪ್ರಾಮಾಣಿಕವೂ, ಜನಹಿತಕಾರಿಯೂ ಆದ ಪ್ರಯೋಗಗಳಿಗೆ ಸದಾಕಾಲವೂ ಒಡ್ಡಿಕೊಳ್ಳುವಂತೆ ಪ್ರೇರೇಪಿಸುತ್ತಿರುತ್ತದೆ; ಜೊತೆಗೆ ದಾರಿತಪ್ಪಿದಾಗ, ಆದರ್ಶಗಳಿಗೆ ಬೆನ್ನುತಿರುಗಿಸಿದಾಗ ನಮ್ಮಲ್ಲಿ ವಿವಿಧ ಪ್ರಮಾಣಗಳ ಪಾಪಪ್ರಜ್ಞೆ ಹಾಗೂ ನಡುಕ ಹುಟ್ಟಿಸುವ ಸಂದರ್ಭಗಳು ಸಹ ಇದ್ದೇ ಇರುತ್ತವೆ. ಹೀಗಾಗಿ ನಮ್ಮ ಹೊಸಸಾಂಸ್ಕøತಿಕ ಬದುಕನ್ನು ಹಸನಾಗಿಸುವ ಸಾಮೂಹಿಕ ಹೊಣೆಗಾರಿಕೆಯ ಬದ್ಧತೆಯ ಬಗ್ಗೆ ನಾವೆಲ್ಲ ಮೈಯೆಲ್ಲಾ […]
-ಮಾಲತಿ ಪಟ್ಟಣಶೆಟ್ಟಿ ವಿಶ್ವದಾದ್ಯಂತ ಆಕ್ರಮಿಸಿಕೊಂಡು ಜನರನ್ನು ನಲುಗಿಸಿದ ಕೊರೋನಾ ಸಾಂಕ್ರಾಮಿಕದಿಂದ ಜನಮನದಲ್ಲಿ ಆವರಿಸಿದ ಭಯ, ಆತಂಕ, ಅಸಹಾಯಕತೆ, ಖಿನ್ನತೆ ಮತ್ತು ನಿಷ್ಕ್ರಿಯತೆ ಗಳನ್ನು ಹೊಡೆದೋಡಿಸುವ ರೋಗನಿರೋಧಕ ಔಷಧಿ, ಚುಚ್ಚುಮದ್ದುಗಳ ಆವಿಷ್ಕಾರಗಳು ಇತ್ತೀಚಿಗೆ ಆಗಿವೆ. ಇದು ಹಲವು ದೇಶಗಳ ವಿಜ್ಞಾನಿಗಳ ಕಠಿಣ ಪರಿಶ್ರಮದ ಫಲ. ಈ ಔಷಧಿಗಳ ಪ್ರಯೋಗಗಳು ರೋಗಿಗಳ ಮೇಲೆ ಆಗಿ ಯಶಸ್ಸನ್ನು ಕಂಡಿವೆಯಾದ್ದರಿಂದ ಈ ರೋಗದ ಕರಿನೆರಳು ಕರಗಿ ನೆಮ್ಮದಿಯ ಬಾಳು ನಮ್ಮದಾಗಬಹುದೆಂದು ಆಶಿಸೋಣ. ಈ ಭೂಮಿಯ ಮೂಲ ಸಂಪತ್ತುಗಳೆಂದರೆ ಜಲ, ನೆಲ ಮತ್ತು ವಾಯು. […]
-ಪ್ರಸಾದ್ ನಾಯ್ಕ್ 2020 ನಿಸ್ಸಂದೇಹವಾಗಿ ಹಲವು ನಿರಾಶೆಗಳನ್ನು ಹೊತ್ತುತಂದ ವರ್ಷ. ತೀರಾ ಹಾಲಿವುಡ್ ಶೈಲಿಯಲ್ಲಿ ಬಂದಪ್ಪಳಿಸಿದ ಕೊರೊನಾ ಮಹಮ್ಮಾರಿ ಜಗತ್ತಿನಾದ್ಯಂತ ಎಲ್ಲರನ್ನೂ ಕಾಡಿತು. ಈಚೆಗೆ ಮಿತ್ರರೊಬ್ಬರೊಂದಿಗೆ ಮಾತನಾಡುತ್ತಾ ವಿಶ್ವಯುದ್ಧ-1 ಮತ್ತು 2 ರ ಅವಧಿಯಂತೆ ನಾವೂ ಕೂಡ ಕಾಲಚಕ್ರದ ಮಹಾಪಲ್ಲಟವೊಂದಕ್ಕೆ ಸಾಕ್ಷಿಯಾಗುತ್ತಿದ್ದೇವೆ ಎಂದು ಹೇಳಿಕೊಂಡೆ. ನಿಸ್ಸಂದೇಹವಾಗಿ ಹಲವು ವರ್ಷಗಳ ಕಾಲ ನೆನಪಿ ನಲ್ಲುಳಿಯುವ ಮಹತ್ವದ ಕಾಲ ಘಟ್ಟವಿದು. 2021ನ್ನು ಸ್ವಾಗತಿಸುವ ಭರದಲ್ಲಿ ಎಂದಿನಂತೆ ಈ ಬಾರಿಯೂ ನಿರೀಕ್ಷೆಗಳಿರುವುದು ಸ್ಪಷ್ಟ. ವೈಯಕ್ತಿಕ ನೆಲೆಯ ಅಂಶಗಳು ಏನೇ ಇರಲಿ. ಓರ್ವ […]
-ಪದ್ಮರಾಜ ದಂಡಾವತಿ ಭವಿಷ್ಯಕ್ಕೆ ಒಂದು ಭರವಸೆ ಬೇಕು. ಆದರೆ ಅಂಥ ಭರವಸೆಯ ಬೀಜಗಳು ಭೂತಕಾಲದಲ್ಲಿ ನೆಟ್ಟಿರಬೇಕು. ಹಾಗೆ ನೆಟ್ಟಿದ್ದರೆ ಅದರ ಫಲಗಳು ನಮಗೆ ಸಿಗುತ್ತವೆ. ಹೆಚ್ಚೆಂದರೆ, ನಮಗೆ ನೂರು ವರ್ಷ ಆಯುಷ್ಯವಿದ್ದರೂ ಸಾವಿರ ವರ್ಷ ಬದುಕುತ್ತೇವೆ ಎಂಬ ಭರವಸೆಯಲ್ಲಿಯೇ ಬದುಕುತ್ತ ಇರುತ್ತೇವೆ! ಆದರೆ, ಇನ್ನೇನು ಹತ್ತು ಇಪ್ಪತ್ತು ದಿನಗಳಲ್ಲಿ ನಾವು ಹೊಸ ವರ್ಷಕ್ಕೆ ಕಾಲು ಇರಿಸುತ್ತೇವೆ. ಈ ವರ್ಷ ನಾವು ಪಟ್ಟ ಕಷ್ಟ ಕೋಟಲೆ ನೋಡಿದರೆ ಮುಂದಿನ ವರ್ಷ ಅದು ಅಂಥ ಭರವಸೆಯ ವರ್ಷ ಆಗಿರುತ್ತದೆ ಎಂದು […]
-ಡಾ.ವಿನತೆ ಶರ್ಮ 2021 ಹೊಸವರ್ಷವೇ ಸರಿ. ಅದಕ್ಕೆ ಏನಾದರೂ ಸ್ವಲ್ಪ ಹೊಸತನವನ್ನು ಸೇರಿಸೋಣ ಎಂದು ಮನಸ್ಸು ಆಶಿಸಿದರೂ ಅದೇ ಮನಸ್ಸು ಹಿಂಜರಿಯುತ್ತದೆ. ಪ್ರೈಮರಿ ಶಾಲೆಯಲ್ಲಿ ಉರು ಹೊಡೆದ ‘ಆಸೆಯೇ ದುಃಖಕ್ಕೆ ಮೂಲ’ ಎಂಬ ಬುದ್ಧೋಪದೇಶ ಸುಳಿಯುತ್ತದೆ. ಈ ಕೊರೋನ ವೈರಸ್ ಹಾವಳಿ ತುಂಬಿದ 2020 ಕಠಿಣ ವರ್ಷದ ಬಿಸಿಯ ಹಬೆ ಇನ್ನೂ ನಮ್ಮನ್ನೆಲ್ಲಾ ಆವರಿಸಿರುವುದರಿಂದ ಏನನ್ನೂ ಆಶಿಸುವುದು ಬೇಡ, ಒಂದಷ್ಟು ನಿರೀಕ್ಷೆಗಳಾದರೂ ಇದ್ದರೆ ಸೈ, ಮನುಷ್ಯ ಸ್ವಭಾವವಲ್ಲವೇ. ಎಲ್ಲರಿಗೂ ಯಾವುದೇ ಭೇದಭಾವವಿಲ್ಲದೆ ಆರೋಗ್ಯಭಾಗ್ಯವಿರಲಿ. ಇದು ನನ್ನ ಮೊದಲ […]
-ಎನ್.ಆರ್.ವಿಶುಕುಮಾರ್ ನಲವತ್ತು ವರ್ಷಗಳ ಹಿಂದೆ ನಾವು ಪತ್ರಿಕೋದ್ಯಮ ಪದವಿ ತರಗತಿಗಳಲ್ಲಿ ಕಲಿಯುತ್ತಿದ್ದಾಗ, ಮಾಧ್ಯಮಗಳು ಎಂದೂ ಪಕ್ಷಪಾತಿಯಾಗಕೂಡದು, ಸುದ್ದಿಗಳನ್ನು ಇರುವಂತೆಯೇ ಹೇಳಬೇಕು; ತಿರುಚಬಾರದು, ಅತಿರಂಜಿತ ಮಾಡಬಾರದು, ಯಾವುದೇ ಕಾರಣಕ್ಕೂ ನಮ್ಮ ಅಭಿಪ್ರಾಯವನ್ನು ಸುದ್ದಿಯ ಒಳಕ್ಕೆ ತೂರಿಸಬಾರದು, ವಸ್ತುನಿಷ್ಠೆಯೇ ಸುದ್ದಿಯ ಜೀವಾಳವಾಗಿರಬೇಕು -ಹೀಗೆ ಸುದ್ದಿ ಬರೆಯುವ ಬಗ್ಗೆ ಹಲವಾರು ಮೂಲಪಾಠಗಳನ್ನು ಹೇಳಿಕೊಡುತ್ತಿದ್ದರು. ಪತ್ರಿಕೋದ್ಯಮ ಪಾಠ ಕಲಿತ ನಲವತ್ತು ವರ್ಷಗಳ ನಂತರ ಈಗ ಮಾಧ್ಯಮ ಲೋಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ದಿಗಿಲಾಗುತ್ತದೆ. ಸುದ್ದಿಯನ್ನು ತಿರುಚಿ ಹೇಳಲಾಗುತ್ತಿದೆ. ಅತಿರಂಜಿಸಲಾಗುತ್ತಿದೆ. ಮಾಧ್ಯಮ ಸಂಸ್ಥೆಯ ಮೂಗಿನ […]
-ಅನುಷಾ ಎನ್.ಪಾಟೀಲ ಪ್ರತಿಯೊಂದು ಹೊಸ ಆರಂಭವೂ ಹೊಸ ಆಕಾಂಕ್ಷೆಗಳು, ಆಲೋಚನೆಗಳು, ಚಿಂತನೆಗಳು ನಿರೀಕ್ಷೆಗಳೊಂದಿಗೆ ಗರಿಗೆದರಿಕೊಳ್ಳುತ್ತವೆ. 2020ಕ್ಕಿಂತ ಭಿನ್ನವಾಗಿ 2021ನೇ ವರ್ಷ ಇರಲೆಂಬ ಆಶಯ, ನಿರೀಕ್ಷೆ, ಒಲವು ಎಲ್ಲರದು. 2021 ನಿಜವಾಗಿ ನಿರೀಕ್ಷೆ, ಆಶಯಗಳ ಪಟ್ಟಿಯನ್ನು ಹೆಚ್ಚಿಸಿದೆ. ಪ್ರತಿ ವರ್ಷದ ಆರಂಭದಲ್ಲಿ ಯಾವುದಾದರೂ ಅಪೂರ್ವ ಸಾಧನೆ ಈ ಬಾರಿ ಆಗಬೇಕೆಂಬ ಯೋಜನೆ ಮನದಲ್ಲಿ ಗರಿಗೆದರುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ. ಸರಳತೆ, ಸಾಮಾನ್ಯವಾದುದರ ಕಡೆ ಎಲ್ಲರ ಚಿಂತನೆ ಹರಿದಿದೆ. ದೊಡ್ಡ ಮಟ್ಟಕ್ಕಿಂತಲೂ ಈ ಸಲ ಆರೋಗ್ಯ, ಆರ್ಥಿಕ ಚೈತನ್ಯ, […]
-ಡಾ.ಉಮಾ ವೆಂಕಟೇಶ್ ನಾನೊಬ್ಬಳು ಸಸ್ಯಶಾಸ್ತ್ರ ಸಂಶೋಧಕಿ; ವಿಜ್ಞಾನದಲ್ಲಿ ಆಳವಾದ ನಂಬಿಕೆಯುಳ್ಳವಳು. ಕಳೆದ ಒಂದು ವರ್ಷದಲ್ಲಿ ಈ ಪ್ರಪಂಚದ ಬಹುತೇಕ ದೇಶಗಳಲ್ಲಿ ಕೋವಿಡ್-19 ಎನ್ನುವ ವೈರಸ್ ಜನರನ್ನು ತನ್ನ ಕಬಂಧಬಾಹುಗಳಲ್ಲಿ ಭದ್ರವಾಗಿ ಬಂಧಿಸಿ ನಲುಗಿಸುತ್ತಿದೆ. ಚೈನಾ ದೇಶದ ವುಹಾನ್ ಎನ್ನುವ ಪ್ರಾಂತದಲ್ಲಿ ಪ್ರಾರಂಭವಾದ ಈ ಸೋಂಕು, ಶೀಘ್ರವಾಗಿ ಜಗತ್ತಿನ ಮೂಲೆಮೂಲೆಗಳನ್ನೂ ತಲುಪಿದಾಗ, ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಮಹಾಮಾರಿಯ ದರ್ಜೆ ನೀಡಿತು. ಮೊದಲ 6 ತಿಂಗಳ ಅವಧಿಯಲ್ಲೇ ಸಹಸ್ರಾರು ಜನ ಇದಕ್ಕೆ ಬಲಿಯಾದರು. ತಜ್ಞರು ಸಲಹೆಗಳನ್ನು ಕಡೆಗಣಿಸಿದ ಸಣ್ಣ […]
-ಎಲ್.ಪಿ.ಕುಲಕರ್ಣಿ ಕೊರೊನಾ ಅಂತ ಮನುಷ್ಯ ಕೈಕಟ್ಟಿ ಕುಳಿತಿಲ್ಲ; ವಿಜ್ಞಾನ-ತಂತ್ರಜ್ಞಾನದ ಮೂಲಕ ಹತ್ತುಹಲವು ಆವಿಷ್ಕಾರಗಳನ್ನು ಮಾಡಿ ಕೋವಿಡ್-19 ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿದ್ದಾನೆ. ವೈದ್ಯಕೀಯ ಕ್ಷೇತ್ರಕ್ಕೆ ನೆರವಾಗಬಲ್ಲ ಕೆಲವು ಆವಿಷ್ಕಾರಗಳು ಹೀಗಿವೆ. ಟೈನಿ ಫೈಟರ್ ಕೊರೊನಾ ಸೋಂಕಿತ ವ್ಯಕ್ತಿ ಮುಟ್ಟಿದ ಎಲ್ಲ ವಸ್ತುಗಳ ಮೇಲೆ ಗಂಟೆಗಳು, ದಿನಗಳ ಲೆಕ್ಕದಲ್ಲಿ ವೈರಾಣು ಕುಳಿತಿರುತ್ತದೆ. ಅಂದರೆ, ನಾವು ಬಳಸುವ ಎಟಿಎಮ್ ಮಷಿನ್ನಿನ ಬಟನ್ ಹಾಗೂ ಸ್ಕ್ರೀನ್, ಎಲಿವೇಟರ್, ಟೇಬಲ್, ಗ್ಲಾಸುಗಳು, ಪುಸ್ತಕ… ಇನ್ನೂ ಮುಂತಾದ ಪರಿಕರಗಳು. ಇಂತಹ ವಸ್ತುಗಳನ್ನು ನಾವು ಮುಟ್ಟಿದಾಗ ನಮಗೂ […]
-ಡಾ.ವಿಷ್ಣು ಎಂ. ಶಿಂದೆ ಸಾಂಪ್ರದಾಯಿಕ ಸಂವಹನದಲ್ಲಿ ಸಂದೇಶಕಾರ, ಸಂದೇಶ ಹಾಗೂ ಸ್ವೀಕರಿಸುವವರ ನಡುವೆ ಸಂವಹನ ಪ್ರಕ್ರಿಯೆ ನಡೆಯುತ್ತಿತ್ತು. ಇಂದು ಹಾಗಲ್ಲ, ಸಂವಹನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಬಂದಿವೆ. ಸಂವಹನವು ಒಂದು ಕಲೆ; ಅಭ್ಯಾಸದಿಂದ ಬರುತ್ತದೆ, ಅದು ಕೇವಲ ಹೇಳುವಿಕೆಯಲ್ಲ, ಒಂದು ಅರ್ಥವಲ್ಲ. ಸಂವಹನವು ನಿರೂಪಿಸುವ, ಅರ್ಥೈಸುವ, ತಿಳಿಸುವ ಒಟ್ಟು ಪ್ರಕ್ರಿಯೆ. ನಮ್ಮ ಮೆದುಳು ಏಕಕಾಲದಲ್ಲಿ ಅನೇಕ ಮನೋಕ್ರಿಯೆಗಳನ್ನು ಸಂಘಟಿಸುತ್ತದೆ. ಸಂವಹನವೆನ್ನುವುದು ಮಾತನಾಡುವುದಲ್ಲ. ಇದು ಹೇಳುವ, ವಿಷಯ ಸಂಘಟಿಸುವ ಮತ್ತು ಎದುರಿಗಿರುವ ವ್ಯಕ್ತಿಗೆ ಆ ವಿಷಯವನ್ನು ಸಾಗಿಸುವ ಸಮಗ್ರ ಕ್ರಿಯೆಯಾಗಿದೆ. […]
-ಪುರುಷೋತ್ತಮ ಆಲದಹಳ್ಳಿ ನೇಪಾಳದಲ್ಲಿ ಸಾಂವಿಧಾನಿಕ ಕ್ಷೋಬೆ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿಯವರು ಮತ್ತೊಮ್ಮೆ ನೇಪಾಳವನ್ನು ಸಾಂವಿಧಾನಿಕ ಕ್ಷೋಭೆಗೆ ದೂಡಿದ್ದಾರೆ. ಸಂಸತ್ತಿನ 275 ಸದಸ್ಯರ ಕೆಳಮನೆ ‘ಪ್ರತಿನಿಧಿ ಸಭಾ’ವನ್ನು ವಿಸರ್ಜಿಸುವಂತೆ ಕ್ಯಾಬಿನೆಟ್ ನಿರ್ಣಯ ತೆಗೆದುಕೊಂಡು ನೇಪಾಳದ ಅಧ್ಯಕ್ಷೆ ಬಿದ್ಯಾದೇವಿ ಭಂಡಾರಿಗೆ ಶಿಫಾರಸು ಮಾಡಿದ್ದಾರೆ. ಈ ಕ್ಯಾಬಿನೆಟ್ ನಿರ್ಣಯವನ್ನು ಒಪ್ಪಿಕೊಂಡ ಅಧ್ಯಕ್ಷೆ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿ 2021 ರ ಏಪ್ರಿಲ್ 30 ಮತ್ತು ಮೇ 10 ರಂದು ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ್ದಾರೆ. ಓಲಿಯವರಿಗೆ ಸಂಸತ್ತಿನಲ್ಲಿರಲಿ, ತಮ್ಮ ಕ್ಯಾಬಿನೆಟ್ನಲ್ಲಿಯೇ ಬಹುಮತದ ಬೆಂಬಲವಿರಲಿಲ್ಲ. ನೇಪಾಳ […]
-ಡಾ.ವೆಂಕಟಯ್ಯ ಅಪ್ಪಗೆರೆ ನಾಯಿಗಿರುವ ಘ್ರಾಣಶಕ್ತಿ, ಪಕ್ಷಿನೋಟಶಕ್ತಿ, ಗೀಜಗನ ಹಕ್ಕಿ ಗೂಡು ಕಟ್ಟುವ ಕೌಶಲ, ದ್ವಿಲಿಂಗಿ ತಂತ್ರಜ್ಞಾನ ಬಳಸುವ ಸಸ್ಯಗಳು, ಬಾವಲಿಗಳು, ಹುಟ್ಟಿದ ತಕ್ಷಣ ಓಡಾಡುವ ಹಸುಕರುಗಳು; ನೀರಿಗೆ ಬಿಟ್ಟಾಗ ಪೂರ್ವತರಬೇತಿಯಿಲ್ಲದೆ ಕ್ಷಣಾರ್ಧದಲ್ಲಿ ಈಜುವ ಚತುರ್ಪಾದಿಗಳು -ಇವೆಲ್ಲಾ ಮನುಷ್ಯನಿಗೆ ಸಾಧ್ಯವಿಲ್ಲ. ಅವನಿಗೆ ಮೀರಿದ ಇಂದ್ರಿಯ ಶಕ್ತಿ ಪ್ರಾಣಿಪಕ್ಷಿ ಪ್ರಭೇದಗಳಿಗಿದೆ. ಮಾತು ನರಮಾನವರಲ್ಲಿ ಮಾತ್ರ ಎಂಬ ಲೋಕಾರೂಢಿಯಿದೆ. ಮಾನವೇತರ ಜೀವಸಂಕುಲದಲ್ಲಿ ಸಂವಹನಕ್ಕೆ ತಮ್ಮದೇ ಆದ ಭಾಷೆ, ಸಂಜ್ಞೆ, ಸಂಕೇತ, ಅನುಕರಣೆ, ಹೂಂಕಾರ, ಇಂದ್ರಿಯಾತೀತ ಸಂವಹನ ಶಕ್ತಿ ಕಲೆಗಳಿವೆ. ಪ್ರಕೃತಿದತ್ತ ತಂತ್ರ […]
-ಡಾ.ಡಿ.ಸಿ.ನಂಜುಂಡ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಆದಿವಾಸಿಗಳನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಬೇಕೆ ಅಥವಾ ಕೇವಲ ಅವರ ಸಂಸ್ಕೃತಿಯನ್ನು ಮಾತ್ರ ಉಳಿಸಿ ಪೋಷಿಸಬೇಕೆ ಎಂಬುದರ ಕುರಿತು ನಮ್ಮ ಚರ್ಚೆ ಇನ್ನೂ ಮುಗಿದಿಲ್ಲ! ಭಾರತದಲ್ಲಿ 2011ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ ಶೇ.8.8ರಷ್ಟು ಬುಡಕಟ್ಟು ಜನರು ಕಂಡುಬರುತ್ತಾರೆ. ಸಾಮಾನ್ಯ ಜನರಿಗೆ ಹೋಲಿಸಿದಾಗ ಆದಿವಾಸಿಗಳು, ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಇತರರಿಗಿಂತ ಭಿನ್ನರಾಗಿದ್ದು ಅತ್ಯಂತ ಹಿಂದುಳಿದವರಾಗಿದ್ದಾರೆ. ರಾಜ್ಯದಲ್ಲಿ 2011ನೇ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 43 ಲಕ್ಷ ವಿವಿಧ […]
–ಚೂಟಿ ಚಿದಾನಂದ ಕಳೆದ ಮೂವತ್ತೇಳು ವರ್ಷಗಳಿಂದ ಸಚಿವರ ಆಪ್ತ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿರುವ ಚೂಟಿ ಚಿದಾನಂದ ಅವರು ಈಗ 24ನೇ ಸಚಿವರ ಬಳಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯವಾಗಿ ಸಚಿವರು ತಮ್ಮ ಆಪ್ತ ಶಾಖೆಗೆ ಅತ್ಯಂತ ನಂಬಿಗಸ್ಥರು ಮತ್ತು ದಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವಿಶಿಷ್ಟ ಹೊಣೆಗಾರಿಕೆಯ ಕಾರ್ಯನಿರ್ವಹಣೆಯಲ್ಲಿ ಪಳಗಿರುವ ಕಾರಣದಿಂದಾಗಿಯೇ ಚಿದಾನಂದ ಅವರು ಎಲ್ಲಾ ಸರ್ಕಾರಗಳಲ್ಲಿಯೂ ಸಚಿವರ ಬಹು ಬೇಡಿಕೆಯ ಆಪ್ತ ಸಹಾಯಕರು. ತೀಕ್ಷ್ಣ ಹಾಸ್ಯಪ್ರಜ್ಞೆ ಮತ್ತು ಸೂಕ್ಷ್ಮ ಗ್ರಹಿಕೆ ಹೊಂದಿರುವ ಅವರು ತಮ್ಮೆದುರು ನಡೆದ ಪ್ರಸಂಗಗಳನ್ನು ‘ಸಚಿವರೊಂದಿಗೆ […]
-ಓ.ಎಲ್.ನಾಗಭೂಷಣ ಸ್ವಾಮಿ ಕನ್ನಡದ ವಿಮರ್ಶಾ ಬರಹಗಳು ನಿಜಕ್ಕೂ ಕೃತಿಗಳಿಗೆ, ಕೃತಿಕಾರರಿಗೆ ನ್ಯಾಯ ಒದಗಿಸುತ್ತಿವೆಯೇ? ಪುಸ್ತಕಗಳ ಪರಿಚಯ, ಅವಲೋಕನ, ಬೆನ್ನುಡಿ, ಮುನ್ನುಡಿಗಳ ಹೆಸರಿನಲ್ಲಿ ಪ್ರಕಟವಾಗುವ ಏಕಮುಖೀ ಹೊಗಳಿಕೆ-ತೆಗಳಿಕೆಗಳು ವಸ್ತುನಿಷ್ಠ ವಿಮರ್ಶೆಯನ್ನು ನುಂಗಿಹಾಕುತ್ತಿವೆಯೇ? ಈ ಕುರಿತ ಆರೋಗ್ಯಪೂರ್ಣ ಸಂವಾದಕ್ಕೆ, ಕೃತಿಗಳ ನಿಷ್ಪಕ್ಷಪಾತ ವಿಮರ್ಶೆಗೆ ವೇದಿಕೆಯಾಗಬೇಕೆಂಬುದು ಸಮಾಜಮುಖಿಯ ಆಶಯ. ವಿಮರ್ಶೆಯನ್ನು ಕುರಿತು ಮಾತಾಡಲು ಹೊರಟರೆ, `ಹೊನ್ನ ತೂಗಿದ ತ್ರಾಸು ಕಟ್ಟಳೆ ಹೊನ್ನಿಂಗೆ ಸಮನಪ್ಪುದೇ,’ ಎಂದು ಅಲ್ಲಮ ಕೇಳಿದ ಪ್ರಶ್ನೆ ನೆನಪಾಗುತ್ತದೆ. ಚಿನ್ನವನ್ನು ತೂಗುವ ತಕ್ಕಡಿ ಚಿನ್ನಕ್ಕೆ ಸಮವೇ ಅನ್ನುವ ಪ್ರಶ್ನೆಯಲ್ಲೇ `ಖಂಡಿತ […]
-ಮೋಹನದಾಸ್ ಲೇಖಕಿ ಅಮೃತಾ ಶಾರವರ ಈ ಹೊತ್ತಿಗೆ ಅತ್ಯಂತ ಸಮರ್ಥವಾಗಿ ವಿಕ್ರಮ್ ಸಾರಾಭಾಯಿಯೆಂಬ ಈ ಪರಮ ಸಾಧಕನ ಜೀವನವನ್ನು ಬಿಚ್ಚಿಟ್ಟಿದೆ. ಹಲವು ಮಜಲುಗಳ ಸಾಧನೆಯ ಮತ್ತು ಹಲವು ಆಯಾಮಗಳ ವ್ಯಕ್ತಿತ್ವ ವಿಶ್ಲೇಷಣೆಯ ಈ ಜೀವನಚರಿತ್ರೆ ನಿಜಕ್ಕೂ ಮಹನೀಯನೊಬ್ಬನ ಜೀವನವನ್ನು ಅರ್ಥೈಸುವ ರೀತಿಯ ಮಾದರಿಯಾಗಿದೆ. ದಕ್ಷಿಣ ಭಾರತದಲ್ಲಿ ಮತ್ತು ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ನಾವು ಸರ್ ಎಂ.ವಿಶ್ವೇಶ್ವರಯ್ಯನವರ ಅನನ್ಯ ಕೊಡುಗೆಯನ್ನು ಸ್ಮರಿಸುತ್ತೇವೆ. ಭದ್ರಾವತಿ ಉಕ್ಕಿನ ಕಾರ್ಖಾನೆ, ಮೈಸೂರು ಪೇಪರ್ ಮಿಲ್ಸ್, ಕನ್ನಂಬಾಡಿ ಕಟ್ಟೆ, ಶಿಂಷಾ ವಿದ್ಯುತ್ ಸ್ಥಾವರ, ಇನ್ಸ್ಟಿಟ್ಯೂಶನ್ […]