ಸುರ್ಜಿತ್ ಎಸ್. ಭಲ್ಲಾ ಕರನ್ ಭಾಸಿನ್ ಕೋವಿಡ್ ವಿರುದ್ಧದ ಹೋರಾಟದ ಯಶಸ್ಸಿನಲ್ಲಿ ಲಾಕ್ಡೌನ್ ಕಡ್ಡಾಯವಾಗಿ ಅತ್ಯಗತ್ಯವಾದ ಕ್ರಮವೇನಲ್ಲ ಎಂಬುದು ಲಭ್ಯವಿರುವ ಸಂಗತಿಗಳಿOದ ತಿಳಿಯುತ್ತದೆ. ನೂರಕ್ಕೂ ಹೆಚ್ಚು ರಾಷ್ಟçಗಳು ಲಾಕ್ಡೌನ್ ವಿಧಿಸಿದರೂ ಕೆಲವು ಮಾತ್ರ ಯಶಸ್ಸು ಕಂಡವು. ಚೀನಾದಿಂದ ಹೊರಗೆ ಕೋವಿಡ್-19 ವೈರಾಣು ಕಾಲಿಟ್ಟು ಒಂದು ವರುಷವೇ ಕಳೆದಿದೆ. ಈ ವೈರಸ್ ಕೊನೆಯಾಗುವ ಬಗ್ಗೆ ಹಲವಾರು ಊಹಾಪೋಹಗಳು ಇದ್ದರೂ, ಅದರ ಉಪಟಳ ಸದ್ಯಕ್ಕೆ ಇನ್ನೂ ಮುಂದುವರೆದಿದೆ. ಜುಲೈ 2020ರ ನಂತರ, ವಿಶ್ವದ ಹಲವೆಡೆ ಕಾಣಿಸಿಕೊಂಡಿರುವ ಎರಡನೇ ಅಲೆಯು ಮೊದಲಿಗಿಂತಲೂ […]
-ಪುರುಷೋತ್ತಮ ಆಲದಹಳ್ಳಿ ಲಸಿಕೆ ರಾಷ್ಟçವಾದ ವ್ಯಾಕ್ಸಿನ್ ನ್ಯಾಶನಲಿಸಮ್ ಕೋವಿಡ್ ಸಾಂಕ್ರಾಮಿಕಕ್ಕೆ ನಾಲ್ಕೆöÊದು ಲಸಿಕೆಗಳು ಬಿಡುಗಡೆಯಾಗುತ್ತಲೇ ‘ವ್ಯಾಕ್ಸಿನ್ ನ್ಯಾಶನಲಿಸಮ್’ ಅಥವಾ ಲಸಿಕೆ ರಾಷ್ಟçವಾದ ಕೊರೊನಾ ನಿಯಂತ್ರಣಕ್ಕೆ ಅಡ್ಡಿಪಡಿಸುವಂತೆ ಕಾಣಿಸುತ್ತಿದೆ. ಇದರಿಂದ ಶ್ರೀಮಂತ ರಾಷ್ಟçಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಲಸಿಕೆ ಲಭ್ಯವಾಗಲಿದ್ದು ಏಷ್ಯಾ-ಆಫ್ರಿಕಾ-ಲ್ಯಾಟಿನ್ ಅಮೆರಿಕದ ಬಡದೇಶಗಳು ಇನ್ನೂ ಒಂದು ವರ್ಷ ಸಾಂಕ್ರಾಮಿಕದ ಕೆಂಗಣ್ಣಿಗೆ ಗುರಿಯಾಗಬೇಕಾದ ಸಾಧ್ಯತೆ ಕಾಣಿಸುತ್ತಿದೆ. ಶ್ರೀಮಂತ ರಾಷ್ಟçಗಳು ಲಸಿಕೆ ಉತ್ಪಾದಕ ಕಂಪನಿಗಳೊAದಿಗೆ ಒಡಂಬಡಿಕೆ ಮಾಡಿಕೊಂಡು ಮೊದಲು ಉತ್ಪಾದನೆಯಾಗುವ ಲಸಿಕೆ ಸರಕು ಪೂರೈಕೆಯನ್ನು ತಮ್ಮ ರಾಷ್ಟçಗಳಿಗೆ ಸೀಮಿತ ಮಾಡಿಕೊಳ್ಳುವುದಕ್ಕೆ ‘ಲಸಿಕೆ ರಾಷ್ಟçವಾದ’ […]
-ಎo.ಕೆ.ಆನoದರಾಜೇ ಅರಸ್ ಈ ಮಹಾನ್ ಮಾಧ್ಯಮ ನಾಯಕ ಈಗ ಸಾರ್ವಜನಿಕ ಕಟಕಟೆಯಲ್ಲಿ ನಿಂತಿದ್ದು, ನ್ಯಾಯಾಂಗದ ಕಟಕಟೆಯಲ್ಲಿ ನಿಲ್ಲುವ ದಿನಗಳು ದೂರವಿಲ್ಲ. ಸುದ್ದಿ ಮಾಧ್ಯಮದ ಇಂತಹದೊAದು ಬೆಳವಣಿಗೆ ಮಾಧ್ಯಮ ವೃತ್ತಿಪರರನ್ನು ಕಂಗೆಡಿಸಿದೆ. “ಎಲ್ಲದಕ್ಕಿಂತ ಹೆಚ್ಚಾಗಿ, ಪ್ರಪಂಚದಲ್ಲಿ ಎಲ್ಲೇ ಆಗಲಿ ಯಾರದೇ ವಿರುದ್ಧ ಅನ್ಯಾಯವಾಗುತ್ತಿದ್ದರೆ ಅದನ್ನು ಆಳವಾಗಿ ಅನುಭವಿಸುವ ಸಾಮರ್ಥ್ಯವನ್ನು ಹೊಂದಿರಿ.” -ಚೆ ಗೆವಾರ ದೇಶದ ಪ್ರಖ್ಯಾತ ಸುದ್ದಿ ನಿರೂಪಕ ಅರ್ನಬ್ ಗೋಸ್ವಾಮಿ ಈಗ ಹಾಟ್ ಸೀಟ್ನಲ್ಲಿದ್ದಾರೆ. ಅರ್ನಬ್ ಅವರ ಜೀವನ ಹಾಗೂ ವ್ಯಕ್ತಿತ್ವ ವಿರೋಧಾಭಾಸಗಳಿಂದ ತುಂಬಿದೆ ಎನ್ನುವುದಕ್ಕೆ ಇಲ್ಲೊಂದು […]
-ಎಲ್.ಪಿ.ಕುಲಕರ್ಣಿ ಬಾದಾಮಿ ಇದುವರೆಗಿನ ಅಧ್ಯಯನದ ಪ್ರಕಾರ ಈ ಹೊಸ ಗ್ರಹದಲ್ಲಿ ಜೀವಾಂಕುರ ಇರುವ ಯಾವ ಲಕ್ಷಣಗಳೂ ಕಂಡುಬAದಿಲ್ಲ. ಗ್ರಹದ ಆಂತರಿಕ ಅಧ್ಯಯನ ಇನ್ನೂ ನಡೆದಿದೆ. ಸಂಪೂರ್ಣ ಅಧ್ಯಯನದ ನಂತರ, ಅದರಲ್ಲಿ ಜೀವಿಗಳು ಇರುವ ಬಗ್ಗೆ ನಿಖರ ಮಾಹಿತಿ ಸಿಗಬಹುದು! ಆಕಾಶದಲ್ಲಿ ಹೊಳೆಯುವ ನಕ್ಷತ್ರ, ಗ್ರಹ, ಧೂಮಕೇತು ಮುಂತಾದ ಆಕಾಶಕಾಯಗಳ ಕುರಿತು ತಿಳಿದುಕೊಳ್ಳುವುದೆಂದರೆ ಎಲ್ಲಿಲ್ಲದ ಆಸಕ್ತಿ. ಸದ್ಯ, ಆಕಾಶ ವೀಕ್ಷಕರಿಗೆ, ಖಭೌತಶಾಸ್ತçಜ್ಞರಿಗೆ ಅಂತಹದ್ದೊAದು ಕುತೂಹಲಕರ ವಿಷಯ ಕಾದಿದೆ. ಸೂರ್ಯನಂತೆ ಹಲವಾರು ನಕ್ಷತ್ರಗಳನ್ನು ಒಳಗೊಂಡ ಗ್ಯಾಲಕ್ಸಿ ನಮಗೆಲ್ಲರಿಗೂ ಗೊತ್ತಿದೆ. ಅಂತಹ […]
-ಎಲ್.ಪಿ.ಕುಲಕರ್ಣಿ ಕೊರೊನಾ ಅಂತ ಮನುಷ್ಯ ಕೈಕಟ್ಟಿ ಕುಳಿತಿಲ್ಲ; ವಿಜ್ಞಾನ-ತಂತ್ರಜ್ಞಾನದ ಮೂಲಕ ಹತ್ತುಹಲವು ಆವಿಷ್ಕಾರಗಳನ್ನು ಮಾಡಿ ಕೋವಿಡ್-19 ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿದ್ದಾನೆ. ವೈದ್ಯಕೀಯ ಕ್ಷೇತ್ರಕ್ಕೆ ನೆರವಾಗಬಲ್ಲ ಕೆಲವು ಆವಿಷ್ಕಾರಗಳು ಹೀಗಿವೆ. ಟೈನಿ ಫೈಟರ್ ಕೊರೊನಾ ಸೋಂಕಿತ ವ್ಯಕ್ತಿ ಮುಟ್ಟಿದ ಎಲ್ಲ ವಸ್ತುಗಳ ಮೇಲೆ ಗಂಟೆಗಳು, ದಿನಗಳ ಲೆಕ್ಕದಲ್ಲಿ ವೈರಾಣು ಕುಳಿತಿರುತ್ತದೆ. ಅಂದರೆ, ನಾವು ಬಳಸುವ ಎಟಿಎಮ್ ಮಷಿನ್ನಿನ ಬಟನ್ ಹಾಗೂ ಸ್ಕ್ರೀನ್, ಎಲಿವೇಟರ್, ಟೇಬಲ್, ಗ್ಲಾಸುಗಳು, ಪುಸ್ತಕ… ಇನ್ನೂ ಮುಂತಾದ ಪರಿಕರಗಳು. ಇಂತಹ ವಸ್ತುಗಳನ್ನು ನಾವು ಮುಟ್ಟಿದಾಗ ನಮಗೂ […]
-ಡಾ.ವಿಷ್ಣು ಎಂ. ಶಿಂದೆ ಸಾಂಪ್ರದಾಯಿಕ ಸಂವಹನದಲ್ಲಿ ಸಂದೇಶಕಾರ, ಸಂದೇಶ ಹಾಗೂ ಸ್ವೀಕರಿಸುವವರ ನಡುವೆ ಸಂವಹನ ಪ್ರಕ್ರಿಯೆ ನಡೆಯುತ್ತಿತ್ತು. ಇಂದು ಹಾಗಲ್ಲ, ಸಂವಹನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಬಂದಿವೆ. ಸಂವಹನವು ಒಂದು ಕಲೆ; ಅಭ್ಯಾಸದಿಂದ ಬರುತ್ತದೆ, ಅದು ಕೇವಲ ಹೇಳುವಿಕೆಯಲ್ಲ, ಒಂದು ಅರ್ಥವಲ್ಲ. ಸಂವಹನವು ನಿರೂಪಿಸುವ, ಅರ್ಥೈಸುವ, ತಿಳಿಸುವ ಒಟ್ಟು ಪ್ರಕ್ರಿಯೆ. ನಮ್ಮ ಮೆದುಳು ಏಕಕಾಲದಲ್ಲಿ ಅನೇಕ ಮನೋಕ್ರಿಯೆಗಳನ್ನು ಸಂಘಟಿಸುತ್ತದೆ. ಸಂವಹನವೆನ್ನುವುದು ಮಾತನಾಡುವುದಲ್ಲ. ಇದು ಹೇಳುವ, ವಿಷಯ ಸಂಘಟಿಸುವ ಮತ್ತು ಎದುರಿಗಿರುವ ವ್ಯಕ್ತಿಗೆ ಆ ವಿಷಯವನ್ನು ಸಾಗಿಸುವ ಸಮಗ್ರ ಕ್ರಿಯೆಯಾಗಿದೆ. […]
-ಪುರುಷೋತ್ತಮ ಆಲದಹಳ್ಳಿ ನೇಪಾಳದಲ್ಲಿ ಸಾಂವಿಧಾನಿಕ ಕ್ಷೋಬೆ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿಯವರು ಮತ್ತೊಮ್ಮೆ ನೇಪಾಳವನ್ನು ಸಾಂವಿಧಾನಿಕ ಕ್ಷೋಭೆಗೆ ದೂಡಿದ್ದಾರೆ. ಸಂಸತ್ತಿನ 275 ಸದಸ್ಯರ ಕೆಳಮನೆ ‘ಪ್ರತಿನಿಧಿ ಸಭಾ’ವನ್ನು ವಿಸರ್ಜಿಸುವಂತೆ ಕ್ಯಾಬಿನೆಟ್ ನಿರ್ಣಯ ತೆಗೆದುಕೊಂಡು ನೇಪಾಳದ ಅಧ್ಯಕ್ಷೆ ಬಿದ್ಯಾದೇವಿ ಭಂಡಾರಿಗೆ ಶಿಫಾರಸು ಮಾಡಿದ್ದಾರೆ. ಈ ಕ್ಯಾಬಿನೆಟ್ ನಿರ್ಣಯವನ್ನು ಒಪ್ಪಿಕೊಂಡ ಅಧ್ಯಕ್ಷೆ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿ 2021 ರ ಏಪ್ರಿಲ್ 30 ಮತ್ತು ಮೇ 10 ರಂದು ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ್ದಾರೆ. ಓಲಿಯವರಿಗೆ ಸಂಸತ್ತಿನಲ್ಲಿರಲಿ, ತಮ್ಮ ಕ್ಯಾಬಿನೆಟ್ನಲ್ಲಿಯೇ ಬಹುಮತದ ಬೆಂಬಲವಿರಲಿಲ್ಲ. ನೇಪಾಳ […]
-ಡಾ.ವೆಂಕಟಯ್ಯ ಅಪ್ಪಗೆರೆ ನಾಯಿಗಿರುವ ಘ್ರಾಣಶಕ್ತಿ, ಪಕ್ಷಿನೋಟಶಕ್ತಿ, ಗೀಜಗನ ಹಕ್ಕಿ ಗೂಡು ಕಟ್ಟುವ ಕೌಶಲ, ದ್ವಿಲಿಂಗಿ ತಂತ್ರಜ್ಞಾನ ಬಳಸುವ ಸಸ್ಯಗಳು, ಬಾವಲಿಗಳು, ಹುಟ್ಟಿದ ತಕ್ಷಣ ಓಡಾಡುವ ಹಸುಕರುಗಳು; ನೀರಿಗೆ ಬಿಟ್ಟಾಗ ಪೂರ್ವತರಬೇತಿಯಿಲ್ಲದೆ ಕ್ಷಣಾರ್ಧದಲ್ಲಿ ಈಜುವ ಚತುರ್ಪಾದಿಗಳು -ಇವೆಲ್ಲಾ ಮನುಷ್ಯನಿಗೆ ಸಾಧ್ಯವಿಲ್ಲ. ಅವನಿಗೆ ಮೀರಿದ ಇಂದ್ರಿಯ ಶಕ್ತಿ ಪ್ರಾಣಿಪಕ್ಷಿ ಪ್ರಭೇದಗಳಿಗಿದೆ. ಮಾತು ನರಮಾನವರಲ್ಲಿ ಮಾತ್ರ ಎಂಬ ಲೋಕಾರೂಢಿಯಿದೆ. ಮಾನವೇತರ ಜೀವಸಂಕುಲದಲ್ಲಿ ಸಂವಹನಕ್ಕೆ ತಮ್ಮದೇ ಆದ ಭಾಷೆ, ಸಂಜ್ಞೆ, ಸಂಕೇತ, ಅನುಕರಣೆ, ಹೂಂಕಾರ, ಇಂದ್ರಿಯಾತೀತ ಸಂವಹನ ಶಕ್ತಿ ಕಲೆಗಳಿವೆ. ಪ್ರಕೃತಿದತ್ತ ತಂತ್ರ […]
-ಡಾ.ಡಿ.ಸಿ.ನಂಜುಂಡ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಆದಿವಾಸಿಗಳನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಬೇಕೆ ಅಥವಾ ಕೇವಲ ಅವರ ಸಂಸ್ಕೃತಿಯನ್ನು ಮಾತ್ರ ಉಳಿಸಿ ಪೋಷಿಸಬೇಕೆ ಎಂಬುದರ ಕುರಿತು ನಮ್ಮ ಚರ್ಚೆ ಇನ್ನೂ ಮುಗಿದಿಲ್ಲ! ಭಾರತದಲ್ಲಿ 2011ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ ಶೇ.8.8ರಷ್ಟು ಬುಡಕಟ್ಟು ಜನರು ಕಂಡುಬರುತ್ತಾರೆ. ಸಾಮಾನ್ಯ ಜನರಿಗೆ ಹೋಲಿಸಿದಾಗ ಆದಿವಾಸಿಗಳು, ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಇತರರಿಗಿಂತ ಭಿನ್ನರಾಗಿದ್ದು ಅತ್ಯಂತ ಹಿಂದುಳಿದವರಾಗಿದ್ದಾರೆ. ರಾಜ್ಯದಲ್ಲಿ 2011ನೇ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 43 ಲಕ್ಷ ವಿವಿಧ […]
-ಶಿರೂರು ಹನುಮಂತರೆಡ್ಡಿ ಸಂದಿಗ್ಧ ಕಾಲದಲ್ಲಿ ಅಮೆರಿಕೆಯ ಅಧ್ಯಕ್ಷರಾಗಿ ಆಯ್ಕೆಯಾಗಿರೋ ಜೋ ಬೈಡನ್ ಮುಂದೆ ಹಲವು ಸವಾಲುಗಳಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ಆತನ ಕನಸಿನ ಅಮೆರಿಕ ಹೇಗಿರಬಹುದು? ಕಳೆದ ಮೂರು ದಶಕಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಲೇಖಕರು ಮುಂಬರುವ ಬೈಡನ್ ಆಡಳಿತದ ಪ್ರಭಾವಗಳನ್ನು ಸಮಚಿತ್ತದಿಂದ ಅಂದಾಜಿಸಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿದು ಮೂರು ವಾರಗಳಾದರೂ ಸೋಲೊಪ್ಪಿಕೊಳ್ಳದ ಟ್ರಂಪ್ ಭಂಡತನ ಮುಂದುವರಿದಿದೆ. ಆತ ಮತ್ತು ಆತನ ವಕೀಲರ ಪಟಾಲಂ ಹಾಕಿರೋ ಚುನಾವಣಾ ಅಕ್ರಮ ಕೇಸುಗಳೆಲ್ಲ ಒಂದೊOದಾಗಿ ಬಿದ್ದು ಹೋಗುತ್ತಿದ್ದು ಜನವರಿ 20ರಂದು […]
-ಪೂರ್ಣಿಮಾ ಮಾಳಗಿಮನಿ ಇಮೋಜಿ ಹುಟ್ಟಿಗೆ ಸಮಯದ ಅಭಾವ ಅಥವಾ ಸೋಮಾರಿತನವೇ ಕಾರಣ ಇರಬಹುದು. ಆದರೆ ಅದನ್ನು ಉಪಯೋಗಿಸುವ ಮಂದಿ ಖಂಡಿತ ಸೋಮಾರಿ ಗಳಲ್ಲ. ಅವರು ನಿಜಕ್ಕೂ ಸೃಜನಶೀಲರು; ಕಡ್ಡಿ ಮುರಿದಂತೆ ಮಾತನಾಡಿ ಮನಸ್ಸು ಒಡೆಯುವ ಬದಲು ಇಮೋಜಿಗಳ ಉಪಯೋಗದಿಂದ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುವ ಸಹೃದಯರು. ಇತ್ತೀಚೆಗೆ ತಮ್ಮ ಕಾವ್ಯಗಳಿಗೆ ನೊಬೆಲ್ ಪಾರಿತೋಷಕ ಪಡೆದುಕೊಂಡ ಎಪ್ಪತ್ತೇಳು ವರ್ಷದ ಕವಿಯತ್ರಿ ಲೂಯಿಸ್ ಗ್ಲಕ್ ಹೇಳಿದ್ದಾರೆ: Honour the words that enter and attach to […]
ಏಷ್ಯಾ ವಾಣಿಜ್ಯಒಪ್ಪಂದದಿದ ದೂರವುಳಿದ ಭಾರತ -ಪುರುಷೋತ್ತಮ ಆಲದಹಳ್ಳಿ ವಿಶ್ವದ ಮೂರನೇ ಒಂದರಷ್ಟು ವಾಣಿಜ್ಯ ವ್ಯವಹಾರಗಳನ್ನುಳ್ಳ ದೇಶಗಳ ವಾಣಿಜ್ಯ ಒಪ್ಪಂದ ‘ಆರ್ಸಿಇಪಿ’ (ಸಮಗ್ರ ಕ್ಷೇತ್ರೀಯ ಆರ್ಥಿಕ ಪಾಲುದಾರಿಕೆ) ನವೆಂಬರ್ 15 ರಿಂದ ಜಾರಿಯಾಗಿದೆ. ಈ ವಾಣಿಜ್ಯ ಒಕ್ಕೂಟದಲ್ಲಿ ಆಸಿಯಾನ್ ದೇಶಗಳು, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟೆಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳು ಭಾಗಿಯಾಗಿವೆ. ಪರಸ್ಪರ ರಫ್ತು-ಆಮದುಗಳ ಮೇಲೆ ಕಡಿಮೆ ಸಾರ್ವತ್ರಿಕ ಸುಂಕ ನಿಗದಿ ಮಾಡುವ ಈ ಒಪ್ಪಂದ ದೇಶಗಳ ನಡುವೆ ಆಯಾತ-ನಿರ್ಯಾತಗಳನ್ನು ಸರಳಗೊಳಿಸಿ ಹೆಚ್ಚಿನ ವ್ಯಾಪಾರಿ ವಹಿವಾಟಿಗೆ ಅನುವು […]
ಯಶವOತ ಟಿ.ಎಸ್. ಫ್ರಾನ್ಸ್ನಲ್ಲಿ ನಡೆದ ಶಿಕ್ಷಕನ ಕೊಲೆ ಮತ್ತು ಅಲ್ಲಿನ ಭಯೋತ್ಪಾದಕ ಕೃತ್ಯಗಳನ್ನು ನಾವೆಲ್ಲರೂ ಖಂಡಿಸಬೇಕು ಎಂಬುದು ಮಾನವೀಯ ದೃಷ್ಟಿಯಿಂದ ಸರಿ. ಆದರೆ ತಾತ್ವಿಕ, ಐತಿಹಾಸಿಕ ಮತ್ತು ಸಾಂಸ್ಕತಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಫ್ರಾನ್ಸ್ ದೇಶದ ದುರಹಂಕಾರ ಮತ್ತು ಕೀಳು ಮಟ್ಟದ ನಡೆಯನ್ನು ಕೂಡ ಖಂಡಿಸಬೇಕು. ಕೆಲದಿನಗಳ ಹಿಂದಷ್ಟೇ ನಮ್ಮನ್ನೆಲ್ಲಾ ಬೆಚ್ಚಿಬೀಳಿಸುವಂತಹ ಎರಡು ಘಟನೆಗಳು ಫ್ರಾನ್ಸ್ ದೇಶದಲ್ಲಿ ನಡೆದವು; ಪ್ರವಾದಿ ಮೊಹಮ್ಮದರ ಬಗೆಗೆ ಚಾರ್ಲಿ ಹೆಬ್ದೋ ಪ್ರಕಟಿಸಿದ್ದ ವ್ಯಂಗ್ಯ ಚಿತ್ರಗಳನ್ನು ತನ್ನ ವಿದ್ಯಾರ್ಥಿಗಳಿಗೆ ತೋರಿಸಿದ ಶಿಕ್ಷಕನ ತಲೆ ಕಡಿದ […]
-ಡಾ.ಟಿ.ಎಸ್.ಚನ್ನೇಶ್ ಆಲ್ಫ್ರೆಡ್ ನೊಬೆಲ್ ಮರಣ ಹೊಂದಿದ ತಿಂಗಳಾದ ಡಿಸೆಂಬರ್ನಲ್ಲಿ ಮಾತ್ರವೇ ಸಾಮಾನ್ಯವಾಗಿ ಪ್ರಶಸ್ತಿಯನ್ನು ಕೊಡಲಾಗುವುದು. ಆತ ಜನಿಸಿದ ಅಕ್ಟೋಬರ್ ತಿಂಗಳಲ್ಲಿ ಪ್ರಶಸ್ತಿಗಳು ಪ್ರಕಟಣೆಯಾಗುತ್ತವೆ. ಅಂತಯೇ ಈ ವರ್ಷದ ಬಹುಮಾನಗಳನ್ನು ಅಕ್ಟೋಬರ್ 5ರಿಂದ 12ನೆಯ ದಿನಾಂಕಗಳ ನಡುವೆ ಪ್ರಕಟಿಸಲಾಗಿದೆ. ಅಕ್ಟೋಬರ್ ತಿಂಗಳು ಜಾಗತಿಕವಾಗಿ ಅನೇಕರ ಕಣ್ಣು-ಕಿವಿಗಳು ಸ್ವೀಡನ್ನಿನ ಸ್ಟಾಕ್ಹೋಂ ಕಡೆಗೆ ಇರುತ್ತವೆ. ನೊಬೆಲ್ ಸಮಿತಿಯೇ ಇಡೀ ಜಗತ್ತಿನ ಜನಸಮುದಾಯವನ್ನು ವಿಭಜಿಸಿರುವಂತೆ -ನೊಬೆಲ್ ಗಳಿಸಿದವರು ಮತ್ತು ನೊಬೆಲ್ ಗಳಿಸಬೇಕಿರುವವರು- ಎರಡೂ ಪಂಗಡದವರಿಗೂ ಆಸಕ್ತಿಯು ಸಹಜ. ಈ ವರ್ಷದ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ […]
ನ್ಯೂಜಿಲ್ಯಾಂಡಿನಲ್ಲಿ ಮತ್ತೆ ಪ್ರಧಾನಿಯಾದ ಜಸಿಂಡ ಅರ್ಡನ್ ದೇಶದ ಪ್ರಧಾನಿಯಾಗಿದ್ದಾಗಲೇ ಮಗುವೊಂದನ್ನು ಹೆತ್ತು ದಾಖಲೆ ಸೃಷ್ಟಿಸಿದ್ದ ನ್ಯೂಜಿಲ್ಯಾಂಡಿನ ಪ್ರಧಾನಿ ಜಸಿಂಡ ಅರ್ಡನ್ (40 ವರ್ಷಗಳು) ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಜಸಿಂಡ ಅವರ ಲೇಬರ್ ಪಕ್ಷವು ಒಟ್ಟು ಚಲಾಯಿಸಿದ ಮತಗಳಲ್ಲಿ ಶೇಕಡಾ 49ಕ್ಕೂ ಹೆಚ್ಚು ಮತಗಳನ್ನು ಪಡೆದು ನ್ಯೂಜಿಲ್ಯಾಂಡಿನ ಸಂಸತ್ತಿನಲ್ಲಿ ಬಹುಮತ ಪಡೆದಿದೆ. ವಿರೋಧಿ ಪಕ್ಷವಾದ ನ್ಯಾಶನಲ್ ಪಕ್ಷವು ಕೇವಲ 27ರಷ್ಟು ಮತ ಪಡೆದು ಹೀನಾಯ ಸೋಲು ಕಂಡಿದೆ. ಐವತ್ತು ಲಕ್ಷ ಜನಸಂಖ್ಯೆಯ ನ್ಯೂಜಿಲ್ಯಾಂಡ್ ದೇಶವು ಪ್ರೊಪೋರ್ಶನೇಟ್ ಪದ್ಧತಿ ಅನುಸರಿಸುತ್ತಿದೆ. ಇದರಂತೆ […]
ಅನುವಾದ: ನಾ ದಿವಾಕರ ಡೀಪ್ಫೇಕ್ ಎನ್ನಲಾಗುವ ತಂತ್ರ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದ್ದರೂ ಇತ್ತೀಚಿನ ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಎಲ್ಲ ಕ್ಷೇತ್ರಗಳಲ್ಲೂ ಬಳಕೆಯಾಗುತ್ತಿದೆ. ಮೂಲ ಭಾವಚಿತ್ರದಲ್ಲಿರುವ ವ್ಯಕ್ತಿಯ ಜಾಗದಲ್ಲಿ ಮತ್ತೊಬ್ಬ ವ್ಯಕ್ತಿಯ ಭಾವಚಿತ್ರವನ್ನು ಅಳವಡಿಸುವ ಮೂಲಕ ನಕಲಿ ಸುದ್ದಿಗಳನ್ನು ಹರಡುವ ಈ ತಂತ್ರಜ್ಞಾನ ಇದೀಗ ಚುನಾವಣಾ ರಾಜಕಾರಣದಲ್ಲೂ ವ್ಯಾಪಕವಾಗಿ ಬಳಸಲಾಗುತ್ತಿದ್ದು ರಾಜಕೀಯ ವೈರಿಗಳ ವಿರುದ್ಧ ಬಳಸುವ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. ಡೀಪ್ಫೇಕ್ ತಂತ್ರಜ್ಞಾನದ ಬಳಕೆ ವಿಶ್ವದಾದ್ಯಂತ ಚುನಾವಣಾ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬಹುಶಃ ಪ್ರಜಾಸತ್ತಾತ್ಮಕ ಚುನಾವಣೆಗಳ […]
ಥಾಮಸ್ ಫ್ರೆಡ್ಮನ್ ಹೊಸ ಸನ್ನಿವೇಶದಲ್ಲಿ ಕೆಲಸಗಳ ವಿಧಾನ, ಕೆಲಸದ ಸ್ಥಳ ಮತ್ತು ಕೆಲಸಗಾರರು ರೂಪಾಂತರಗೊಳ್ಳಬೇಕಾಗುತ್ತದೆ. ಉದ್ಯಮಗಳು ಅಪೇಕ್ಷಿಸುವುದು ಉದ್ಯೋಗಕ್ಕೆ ಅಗತ್ಯವಾದ ಕುಶಲತೆ ಮತ್ತು ನಿರಂತರ ಕಲಿಕೆ. ಇದು ‘ಪದವಿಯಿಂದ ಕುಶಲತೆಯೆಡೆಗಿನ’ ನಡಿಗೆÀ; ಡಿಗ್ರಿ ಇಲ್ಲದವರಿಗೂ ಸಾಫ್ಟ್ವೇರ್ ಕಂಪನಿಯಲ್ಲಿ ನೌಕರಿ, ಹೋಟೆಲ್ ಕಾರ್ಮಿಕ ಸೈಬರ್ ರಕ್ಷಣೆ ಮಾಡೋ ತಂತ್ರಜ್ಞ, ಟಿಕೆಟ್ ಕೊಡೋ ಗುಮಾಸ್ತೆ ಡೇಟಾ ಸಲಹಾಗಾರ್ತಿ… ಎಲ್ಲವೂ ಸಾಧ್ಯ! ಅನುವಾದ: ಹನುಮಂತರೆಡ್ಡಿ ಸಿರೂರು ನಿಸರ್ಗದ ಲೀಲೆಗಳು ನಿಗೂಢವಾಗಿರುತ್ತವೆ. ಅದು ಕೋವಿಡ್ ಅನ್ನೋ ಸಾಂಕ್ರಾಮಿಕ ಪಿಡುಗನ್ನ ನಮ್ಮ ಅಂಗಳಕ್ಕೆಸೆದು ನಮ್ಮ […]
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವ ರಘುವಂಶಬಾಬು ಇತ್ತೀಚೆಗೆ ನಿಧನರಾದರು. ಅವರ ಅಗಲಿಕೆಯಿಂದ ರಾಷ್ಟ್ರದ ರಾಜಕೀಯ ರಂಗ ಅಪರೂಪದ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ. ಅವರ ವರ್ತನೆ, ಕಾಳಜಿ, ಚಿಂತನೆ, ಯೋಜನೆಗಳನ್ನು ನೆನೆಯುವ ಪ್ರಯತ್ನವಿದು.. – ಸೌಭದ್ರ ಚಟಜಿ೯ ಮಾಜಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ರಘುವಂಶ ಪ್ರಸಾದ್ ಸಿಂಗ್ ಸಂಸತ್ ಕಲಾಪವನ್ನು ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಹೊರಬಂದ ಕೂಡಲೇ ಅಲ್ಲಿ ನೆರೆದಿರುತ್ತಿದ್ದ ಪತ್ರಕರ್ತರೊಡನೆ ಕೆಲಹೊತ್ತು ಮಾತನಾಡುತ್ತಿದ್ದರು. ಇಂತಹ ಪ್ರತಿಯೊಂದು ಸಂದರ್ಭದಲ್ಲೂ ಅವರ ಕಚೇರಿಯ ಅಧಿಕಾರಿಗಳಲ್ಲಿ […]
-ಪುರುಷೋತ್ತಮ ಆಲದಹಳ್ಳಿ ಭಾರತ ಮಿತ್ರ ಜಪಾನ್ ಪ್ರಧಾನಿ ಶಿಂಜೊ ಅಬೆ ನಿವೃತ್ತಿ 2012 ರಿಂದ ಜಪಾನಿನ ಪ್ರಧಾನಿಯಾಗಿದ್ದ ಶಿಂಜೊ ಅಬೆ (66 ವರ್ಷ) ಅನಾರೋಗ್ಯದ ಕಾರಣದಿಂದ ತಮ್ಮ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಎಂಟೂವರೆ ವರ್ಷಗಳಿಂದ ಜಪಾನಿನ ಅತ್ಯಂತ ದೀರ್ಘಕಾಲದ ಪ್ರಧಾನಿಯಾಗಿಯೂ ಅಬೆ ದಾಖಲೆ ಮಾಡಿದ್ದರು. ಇದಕ್ಕೆ ಮೊದಲು ಅಬೆಯವರ ಅಜ್ಜ ಐಸಾಕೊ ಸಾಟೋರವರು 1964 ರಿಂದ 1972 ರವರೆಗೆ ದೀರ್ಘಕಾಲದ ಪ್ರಧಾನಿಯಾಗಿ ದಾಖಲೆ ಹೊಂದಿದ್ದರು. ತಾವು ಬಾಲ್ಯದಿಂದಲೂ ಹೊಂದಿದ್ದ ಕರುಳಿಗೆ ಸಂಬಂಧಿಸಿದ ಖಾಯಿಲೆ ಉಲ್ಬಣಿಸಿದ ಕಾರಣಕ್ಕೆ ಶಿಂಜೊ […]
ಜಿಎಸ್ಟಿ ಎರಡು ಕಾರ್ಪೋರೇಟುಗಳ ನಡುವಿನ ವ್ಯಾಪಾರೀ ಒಪ್ಪಂದವಲ್ಲ. ಅನಿವಾರ್ಯ ಪರಿಸ್ಥಿತಿ ಅಂತ ಯಾವೊಂದು ಕಡೆಯವರೂ ಹಿಂದೆ ಸರಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಜೈಟ್ಲಿಗೆ ಅದು ಸಂಪೂರ್ಣ ಅರ್ಥ ಆಗಿತ್ತು. ಅವರ ಸ್ಥಾನಕ್ಕೆ ಬಂದವರೂ ಅರ್ಥಮಾಡಿಕೊಳ್ಳಬೇಕು. – ಎಸ್.ಎ.ಅಯ್ಯರ್ ಪ್ರತಿವರ್ಷ ಕಂದಾಯ ಸಂಗ್ರಹಣೆ ಶೇಕಡ 14ರಷ್ಟು ಹೆಚ್ಚಾಗುತ್ತದೆ ಎಂದು ಹಿಂದಿನ ವಿತ್ತ ಮಂತ್ರಿಗಳು ರಾಜ್ಯಗಳಿಗೆ ಭರವಸೆಯನ್ನು ನೀಡಿದ್ದರು. ಹಾಗೆಯೇ ಅದರ ಖಾತ್ರಿ ನೀಡುವುದರ ಮೂಲಕ ದೊಡ್ಡ ಉದಾರೀ ಮನೋಭಾವ ಪ್ರದರ್ಶಿಸಿದ್ದರು. ಜೊತೆಗೆ ಒಂದು ದೀರ್ಘಕಾಲೀನ ದೃಷ್ಟಿಯೂ ಅವರಲ್ಲಿತ್ತು. ಈ ಮೂಲಕ ಕೇಂದ್ರ […]