-ಅನಿಲಕುಮಾರ್ ಎನ್. ಕರ್ಣಪಾರ್ಯನ ‘ನೇಮಿನಾಥಪುರಾಣ’ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜನಪ್ರಿಯವಾದ ನೇಮಿನಾಥ ತೀರ್ಥಂಕರನ ಕತೆಯನ್ನು ಆಧರಿಸಿ ರಚನೆಯಾದ ನೇಮಿನಾಥ ಪುರಾಣಗಳ ಉಲ್ಲೇಖ ಸಾಕಷ್ಟು ಇವೆ. ಅದರಲ್ಲಿ ಕರ್ಣಪಾರ್ಯನ ಈ ಕಾವ್ಯ ಐತಿಹಾಸಿಕವಾಗಿ ಮತ್ತು ಕಥನದ ದೃಷ್ಟಿಯಿಂದ ಬಹು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಹಳಗನ್ನಡದ ಪ್ರಸಿದ್ಧ ಚಂಪೂ ಕವಿಗಳಲ್ಲಿ ಕರ್ಣಪಾರ್ಯನೂ ಒಬ್ಬ. ನಮಗೆ ಈ ಹೆಸರಿನ ಹಲವು ಕವಿಗಳಿದ್ದರೆಂದು ತಿಳಿದುಬರುತ್ತದೆ. ಕ್ರಿ.ಶ. 1040ಕ್ಕಿಂತಲೂ ಹಿಂದೆ, ಮಾಲತೀಮಾಧವವೆಂಬ ಕೃತಿಯನ್ನು ರಚಿಸಿದ್ದ, ಇನ್ನೊಬ್ಬ ಕರ್ಣಪಾರ್ಯನು ಇದ್ದನು. ಆತನನ್ನು ಒಂದನೆಯ ಕರ್ಣಪಾರ್ಯನೆಂದು ಭಾವಿಸಿದರೆ, […]
-ಪ್ರೊ.ಜಿ.ಎಚ್.ಹನ್ನೆರಡುಮಠ ಆ ಫಾರೆಸ್ಟ್ ಆಫೀಸರು ಜಿಲ್ಲಾ ಪಕ್ಷಿಸರ್ಜನ್ ಮತ್ತು ಗಾರ್ಡುಗಳೊಂದಿಗೆ ಬಂದ. ಅದರ ಮೆಡಿಕಲ್ ಟೆಸ್ಟ್ ಆತು. ಆ ಸರ್ಜನ್ ದಿಲ್ಲಿಗೆ ಅದನ್ನು ಸಾಗಿಸಲು ಯಸ್ ರಿಪೋರ್ಟು ಕೊಟ್ಟ. ಕಡೆಗೆ ಆ ಪಕ್ಷಿಯನ್ನು ದರ್ಗಾ ಕಮೀಟಿಯವರು ಫಾರೆಸ್ಟ್ ಆಫೀಸರರಿಗೆ ಹ್ಯಾಂಡ್ ಓವರ್ ಮಾಡುವಾಗ ಎಲ್ಲರ ಕಣ್ಣುಗಳು ಒದ್ದೆಯಾದವು. ನಮ್ಮೂರಿನ ಗುಡ್ಡಗಳು ಕಥೆ ಹೇಳುತ್ತವೆ… ಕಾಡುಗಳು ಇತಿಹಾಸ ಬಚ್ಚಿಟ್ಟಿವೆ… ಎರೆಮಣ್ಣಿನ ಕನ್ನಡದ ಹೊಳೆ, ಹಳ್ಳ, ಹಳ್ಳಿ, ಹಳುವು, ಕಣಿವೆ, ಕೊನ್ನಾರುಗಳು ಅಸಂಖ್ಯ ರಹಸ್ಯ ಮುಚ್ಚಿಟ್ಟಿವೆ! ಈ ಸತ್ಯ […]
-ಎಸ್. ಮೆಣಸಿನಕಾಯಿ ಕೊನೆಯ ಮೇಜಿನಲ್ಲಿ `ಸಭೆ’ ನಡೆಸುತ್ತಿದ್ದ ಸಿಟ್ರಾಮ, ಡಿಕ್ಕೇಶಿ, ಪರಮೇಶಿ, ಕುಮಾರರಾಮ, ಉರಳುಹೊಳಿ ಇದೇ ಅವಕಾಶ ಬಳಸಿಕೊಂಡು, “ಏನಪಾ ಮಂಜಣ್ಣ, ನಿನ್ನ ನಾಟಕಕ್ಕ ಡೈರೆಕ್ಟರ್ ಯಾರೋ?” ಅಂತ ಕೇಳಿ, ಕಿಡಿ ಹೊತ್ತಿಸಿದರು! “ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ… ಪ್ರಖ್ಯಾತ ನಟ ಸಿಡಿಯೂರಪ್ಪ ನಾಯಕನ ಪಾತ್ರದಲ್ಲಿ ಅಭಿನಯಿಸಿರುವ ಹೊಚ್ಚ ಹೊಸ ನಾಟಕ `ಮುನಿಗಳ ಕಾಟ’ ಅರ್ಥಾತ್ `ಮಾಡಿದ್ದುಣ್ಣೋ ಮಹಾರಾಯ’, ಇಂದು ರಾತ್ರಿ 10 ಗಂಟೆಗೆ ನಾಟಕ ಪ್ರಾರಂಭ…” ಕೈಯಲ್ಲೊಂದು ಸಣ್ಣ ಲೌಡ್ಸ್ಪೀಕರ್ ಹಿಡಿದುಕೊಂಡು ಕೂಗುತ್ತ ಬಂದ ಮಂಜಣ್ಣ. […]
-ಶರೀಫ್ ಕಾಡುಮಠ ಲಾಕ್ ಡೌನ್ ಬಳಿಕ ಥಿಯೇಟರಿನಲ್ಲಿ ಬಿಡುಗಡೆಗೊಂಡ ಮೊತ್ತಮೊದಲ ಚಿತ್ರ ಎಂಬ ಹೆಗ್ಗಳಿಕೆ ಹೊಂದಿದೆ ಆಕ್ಟ್-1978. ಇದು ಸಾಮಾಜಿಕ ವ್ಯವಸ್ಥೆಗೆ, ಅದನ್ನು ಹಾಳುಗೆಡವಿದ ಅಧಿಕಾರಿಗಳ, ರಾಜಕೀಯ ನಾಯಕರ ಮುಖಕ್ಕೆ ಕನ್ನಡಿ ಹಿಡಿಯುತ್ತದೆ. ದೇಹಕ್ಕೆ ಕಟ್ಟಿಕೊಂಡ ಆತ್ಮಾಹುತಿ ಬಾಂಬ್, ಒಂದು ಕೈಯಲ್ಲಿ ಪಿಸ್ತೂಲ್, ಇನ್ನೊಂದು ಕೈಯಲ್ಲಿ ವಾಕಿಟಾಕಿ ಹಿಡಿದು ಕುರ್ಚಿಯಲ್ಲಿ ಕೂತ ಆಕೆಯ ಮುಂದೆ ನೆಲದಲ್ಲಿ ಅಲುಗದೆ ಮುದುಡಿ ಕೂತವರೆಲ್ಲ ಸರ್ಕಾರಿ ಕಚೇರಿ ಉದ್ಯೋಗಿಗಳು… ಕ್ಷಣಕ್ಷಣವೂ ಕೌತುಕ, ಆತಂಕ, ಈಗೇನಾಗುತ್ತದೋ ಏನೋ ಎಂಬ ಅಸಾಧ್ಯ ಕುತೂಹಲ… ಎದೆಬಡಿತ […]
-ಮೂಡ್ನಾಕೂಡು ಚಿನ್ನಸ್ವಾಮಿ ಇರುವೆಗಳಿಗೇಕೆ ಸಕ್ಕರೆ? ಬೆಳ್ಳಂಬೆಳಿಗ್ಗೆ ಬಚ್ಚಲ ಬದಿ ಸಾಗುವ ಸಾಲು ಇರುವೆಗಳಿಗೆ ಸಕ್ಕರೆ ಹಾಕುತ್ತಾರೆ ವಾಯುನಡಿಗೆಯಲ್ಲಿ ರಸ್ತೆ ಬದಿಯ ಬಿಡಾಡಿ ನಾಯಿಗಳಿಗೆ ಬಿಸ್ಕೆಟ್ ಹಾಕುತ್ತಾರೆ ತಮ್ಮ ಹಿತ್ತಲ ಸಂಡಾಸು ತೊಳೆದು ದಣಿದವನಿಗೆ ನೀರು ಕೊಡಲು ನಿರಾಕರಿಸುತ್ತಾರೆ ಪಾರಿವಾಳಗಳಿಗೆ ಕಾಳು ಹಾಕುತ್ತಾರೆ ಗೋವಿಗೆ ಹಣ್ಣು ಹಂಪಲು ನೀಡುತ್ತಾರೆ ವಿಷದ ಹಾವಿಗೂ ಹಾಲೆರೆಯುತ್ತಾರೆ ಹಾವು ಗೋವು ಪವಿತ್ರವಾಗಿರುವ ಈ ನಾಡಲ್ಲಿ ಮನುಷ್ಯ ಮಾತ್ರ ಅಪವಿತ್ರನಾಗಿದ್ದಾನೆ ಮುಟ್ಟಿಸಿಕೊಳ್ಳದವನಾಗಿದ್ದಾನೆ […]
-ಮಹೇಶ್ವರಿ ಯು ಕನ್ನಡ ಭಾಷೆ ಇರುವವರೆಗೆ ನೆನೆಯಬೇಕಾದ ಕವಿ ಕುಮಾರವ್ಯಾಸ. ಅವನ ಶಬ್ದ ಸಂಪತ್ತೊ, ಅವನ ನಿರರ್ಗಳತೆಯೊ, ಅವನ ದೇಸೀ ಪ್ರಿಯತೆಯೊ- ಯಾವುದನ್ನು ಹೇಳೋಣ? ಕನ್ನಡಕ್ಕೆ ಅವನ ಋಣ ಬಹಳ ದೊಡ್ಡದು. ಕನ್ನಡ ಮನಸ್ಸು ಈ ಕವಿಯನ್ನು ಸ್ವೀಕರಿಸಿದ ಬಗೆಯನ್ನು ನಾವಿಲ್ಲಿ ನೆನೆದುಕೊಳ್ಳಬೇಕು. ಕುಮಾರವ್ಯಾಸ ಭಾರತ, ಗದುಗಿನ ಭಾರತ, ಕನ್ನಡ ಭಾರತ, ಕರ್ಣಾಟ ಭಾರತ ಕಥಾ ಮಂಜರಿ ಎಂಬೆಲ್ಲ ಹೆಸರುಗಳಿಂದ ಗುರುತಿಸಲ್ಪಡುವ ಅವನ ಕೃತಿಯು ತನ್ನ ದೇಸಿ ನಡೆಯಿಂದಾಗಿ ಪಂಡಿತರಿಗೆ ಮಾತ್ರವಲ್ಲದೆ ಪಾಮರರಿಗೂ ಪ್ರಿಯವಾಗಿ ಜನಮಾನಸದಲ್ಲಿ ಹಿಂದಿನಿಂದಲೇ […]
-ವೆಂಕಟೇಶ ಮಾಚಕನೂರ ಆಂಗ್ಲ ಭಾಷೆಯ ಕೋಶಗಳಿಗೆ ಲೆಕ್ಕವಿಲ್ಲ. ಒಂದೊಂದು ಅಕ್ಷರಗಳಿಗೆ ಒಂದು ಕೋಶ ಇವೆ. ಇತರ ಅನೇಕ ಭಾಷೆಗಳಲ್ಲೂ ಇವೆ. ಹೀಗೆ ವಿಷಯವಾರು ನಿಘಂಟುಗಳಿರುವಾಗ ರಾಜಕೀಯ ಪಾರಿಭಾಷಿಕ ಶಬ್ದಕೋಶ ಈವರೆಗೆ ರಚನೆಗೊಳ್ಳದಿರುವುದು ಒಂದು ಲೋಪವೇ ಸರಿ! ರಾಜಕೀಯ ನಂಟು ಅನ್ನುವ ಶಬ್ದವನ್ನು ತಾವು ಕೇಳಿಯೇ ಕೇಳಿರುತ್ತೀರಿ, ಅಥವಾ ದಿನಾಲು ವೃತ್ತ ಪತ್ರಿಕೆಗಳ ಮೇಲೆ ಕಣ್ಣಾಡಿಸುವಾಗ ರಾಜಕೀಯ ನಂಟಿನ ಒಂದೆರಡಾದರು ಸುದ್ದಿ ಸಮಾಚಾರಗಳು ತಮ್ಮ […]
-ಬಾಲಚಂದ್ರ ಬಿ.ಎನ್. ನಾಡಿನ ಜನರ ನಾಡಿಮಿಡಿತ, ಹೃದಯಬಡಿತ ಹಾಗೂ ವೀಕ್ಷಕರ ಮನೋಗತವನ್ನು ಇಡೀಯಾಗಿ ಅರಿತ ವಾಹಿನಿಯೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಲ್ಲಿ ಭಾಗವಹಿಸಿದ ಮೂವರು ಜ್ಯೋತಿಷಿಗಳು ಬಯಲು ಮಾಡಿದ ರಹಸ್ಯಗಳನ್ನು ಕೇಳಿದರೆ ನೀವೂ ಬೆಚ್ಚಿಬೀಳುತ್ತೀರಿ! ನಮಸ್ಕಾರ ಪ್ರಿಯ ವೀಕ್ಷಕರೇ, ಕಸ-ವಿಷ ವಿಶೇಷ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸ್ವಾಗತ. ಕನ್ನಡಿಗರ ಸಾಕ್ಷಿ ಪ್ರಜ್ಞೆಯಾಗಿ, ದೇಶದ ಆಗುಹೋಗುಗಳನ್ನು ನಿಮ್ಮೆದುರಿಗಿಡುವ ಮಹತ್ತರ ಕರ್ತವ್ಯ ಹೊತ್ತು, ಅತ್ಯಂತ ಜವಾಬ್ದಾರಿಯುತವಾದ ನಮ್ಮ ಚಾನಲ್ ಈ ಕಾರ್ಯಕ್ರಮವನ್ನು ಮಾಡ್ತಾ ಇದೆ. ಮೂರು ಜನ ಜ್ಯೋತಿಷಿಗಳು ನಮ್ಮ ದೇಶದ, […]
-ಎಂ.ಕೆ.ಆನಂದರಾಜೇ ಅರಸ್ ದತ್ತಾಂಶದ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ದೇಶದ ಮನರಂಜನೆ ಉದ್ಯಮದಲ್ಲಿ ಸಹ ಹೆಚ್ಚಾಗಲಿದ್ದು, ಮುಂಬರುವ ದಿನಗಳಲ್ಲಿ ಈ ಉದ್ಯಮದ ಸ್ವರೂಪ ಬೃಹತ್ ಮಟ್ಟದಲ್ಲಿ ಬದಲಾಗಲಿದೆ. ಪ್ರಖ್ಯಾತ ಮಾರ್ಕೆಟಿಂಗ್ ಗುರು ಫಿಲಿಪ್ ಕೊಟ್ಲರ್ 2014ರಲ್ಲಿ ಬೆಂಗಳೂರಿಗೆ ಬಂದಿದ್ದರು. ಅವರ `ಪ್ರಿನ್ಸಿಪಲ್ಸ್ ಆಫ್ ಮಾರ್ಕೆಟಿಂಗ್’ ಪುಸ್ತಕವನ್ನು ಈಗಲೂ ಎಂಬಿಎ ವಿದ್ಯಾರ್ಥಿಗಳು ಹಾಗೂ ಮಾರ್ಕೆಟಿಂಗ್ ವೃತ್ತಿಪರರು ಮಾರ್ಕೆಟಿಂಗ್ ಬೈಬಲ್ ಎಂದೇ ಪರಿಗಣಿಸುತ್ತಾರೆ. ಸಂವಾದವೊಂದರಲ್ಲಿ ಅವರ ಮುಂದೆ `ಮಾರ್ಕೆಟಿಂಗ್’ ಎಂದರೇನು ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. `ವರ್ತನೆಯ ವಿಜ್ಞಾನದ ಅಧ್ಯಯನ’ ಎಂದು […]
-ಡಾ.ತಿಪ್ಪೇರುದ್ರ ಸಂಡೂರು ಕನ್ನಡ ಸಾಹಿತ್ಯದ ಆರಂಭದ ಗದ್ಯಕೃತಿಗಳಲ್ಲಿ ಚಾವುಂಡರಾಯ ಪುರಾಣವು ಮಹತ್ವದ ಗ್ರಂಥವಾಗಿದ್ದು, ಜೈನ ಧರ್ಮದ ಪುರಾಣಗಳ ಸಮಸ್ತ ತೀರ್ಥಂಕರರ ವಿವರಗಳನ್ನು ನೀಡಿದ ಮೊದಲ ಕೃತಿ ಎನ್ನುವ ಹೆಗ್ಗಳಿಕೆ ಈ ಕೃತಿಗಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನೊಮ್ಮೆ ಅವಲೋಕಿಸಿದಾಗ ಹತ್ತನೆಯ ಶತಮಾನವನ್ನು ‘ಸುವರ್ಣಯುಗ’ ಎಂದು ಗುರುತಿಸಲಾಗಿದೆ. ಈ ಶತಮಾನದಲ್ಲಿ ರಚನೆಯಾದ ಕೃತಿಗಳಲ್ಲಿ ಗದ್ಯಕೃತಿಗಳು ವಿರಳವಾಗಿದ್ದು, ಅಂತಹ ಅಪರೂಪದ ಕೃತಿಗಳಲ್ಲಿ ಚಾವುಂಡರಾಯನು ರಚಿಸಿದ ‘ತ್ರಿಷಷ್ಠಿಲಕ್ಷಣಮಹಾಪುರಾಣ’ ಎಂಬ ಚಾವುಂಡರಾಯ ಪುರಾಣವು ಒಂದು ಮಹತ್ವದ ಗದ್ಯಗ್ರಂಥವಾಗಿದೆ. ಹಳಗನ್ನಡದಲ್ಲಿ ರಚಿತವಾದ ವೈಶಿಷ್ಟö್ಯಪೂರ್ಣ ಗದ್ಯಶೈಲಿಯಿಂದ […]
-ಟಿ.ಕೆ.ಗಂಗಾಧರ ಪತ್ತಾರ ‘ಕಣ್ಣಡಕ’ ಎಂಬುದು ‘ಕನ್ನಡಕ’ ಎಂದಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ‘ಕಣ್ಣಡಕ’ಕ್ಕೆ ಅರ್ಥವಿದೆ; ‘ಕಣ್ಣು’ಗಳಿಗೆ ಅಡಕವಾದದ್ದು ಕಣ್ಣಡಕ. ಹಾಗಾದರೆ ‘ಕನ್ನಡಕ’ ಪದಕ್ಕೆ ಏನರ್ಥ? ಸಾಮಾನ್ಯವಾಗಿ ನರ-ನಾರಿಯರ ವಯಸ್ಸು 40 ವರ್ಷ ತುಂಬಿದಾಗ ಸಮೀಪ ದೃಷ್ಟಿಯಲ್ಲೋ, ದೂರ ದೃಷ್ಟಿಯಲ್ಲೋ ವ್ಯತ್ಯಯವಾಗುವುದು ಸಹಜ. ಕಣ್ಣಿನ ದೃಷ್ಟಿ ಮಂದವಾಗುವುದು, ಎದುರಿನ ಆಕೃತಿ ಎರಡಾಗಿ ನಾಲ್ಕಾಗಿ ಕಾಣುವುದು, ಮಂಜು-ಮOಜಾಗಿ ಗೋಚರಿಸುವುದು, ಏನನ್ನಾದರೂ ದಿಟ್ಟಿಸಿ ನೋಡಿದಾಗ ಕಣ್ಣಲ್ಲಿ ನೀರು ತುಂಬುವುದು, ಕಂಬನಿ ಉದುರುವುದು, ನರ-ನಾಡಿಗಳು ಸೆಳೆದಂತಹ-ಜಗ್ಗಿದOತಹ ಅನುಭವವಾಗುವುದು, ಲಘುವಾಗಿ ತಲೆನೋವು ಬರುವುದು-ಇವೆಲ್ಲಾ ಸರ್ವೇಸಾಮಾನ್ಯ. ಆಗ […]
-ಎಸ್.ಎನ್.ಲಕ್ಷ್ಮೀನಾರಾಯಣ ಚಾವಣಿಯಲ್ಲಿ ಶೇಂಗಾ ಒಣಹಾಕುತ್ತಿದ್ದ ಕೂಲಿ ಆಳುಗಳಲ್ಲಿ ಒಬ್ಬ ನನ್ನ ಅವತಾರವನ್ನು ನೋಡಿದವನೇ, ಗಾಬರಿಯಿಂದ ”ಬ್ಯಾಂಕ್ ಮ್ಯಾನೇಜರ್ ನೇಣೇಸ್ಕುನ್ನಾಡಪೋ” ಅಂಥ ಅರಚಿಕೊಂಡಿದ್ದಾನೆ. ಉಳಿದವರೂ ನೋಡಿ, ಗಾಬರಿಯಾಗಿ ಶ್ಯಾನುಭೋಗರಿಗೆ ಹೇಳಿದ್ದಾರೆ. ಎಲ್ಲಾ ಧಡಧಡ ಓಡ್ಕಂಡು ನಮ್ಮನೆಯತ್ತ ಧಾವಿಸಿದ್ದಾರೆ. ಮುಂದೆ…?! “ಪ್ರಭು, ನಿನ್ ಕಾಲರ್ ಸ್ವಲ್ಪ ದಿನ ಕೊಟ್ಟಿರು. ಆಮೇಲ್ ವಾಪಸ್ ಕೊಡ್ತೀನಿ” ಅಂದ ನನ್ ಕಸಿನ್ನು. ಬೆಳಿಗ್ಗೆ ಎಂಟು ಗಂಟೆಗೇ ಮನೇ ಹತ್ರ ಬಂದಿದ್ದ. ಆರ್ವಿಸಿಇ ಬ್ರಾಂಚ್ನಲ್ಲಿ ಕೆಲಸ ಮಾಡುತ್ತಿದ್ದ ನಾನಾಗ, ನವರಂಗ್ ಥಿಯೇಟರ್ ಸರ್ಕಲ್ ಹತ್ರ ಇದ್ದ […]
-ಸತ್ಯನಾರಾಯಣರಾವ್ ಅಣತಿ ಪ್ರದರ್ಶನದಂತೆ ಗೋಚರಿಸುತ್ತಿದ್ದ ಯಾತ್ರಾರ್ಥಿಗಳ ಅಧ್ಯಾತ್ಮಕ್ಕೆ ಕನಿಕರಿಸುತ್ತಾ ಆ ರಾತ್ರಿಯೇ ಟ್ರೆನಿನಲ್ಲಿ ಗಡವಾಲ್ ಬೆಟ್ಟಸಾಲಿಗೆ ಗುಡ್ಬೈ ಹೇಳಿದೆ. ಕೇದಾರ ಬದರಿ ಪರ್ವತ ಪ್ರದೇಶ ಸುತ್ತಿಬಂದು ಹಲವು ವರ್ಷಗಳು ಗತಿಸಿದರೂ ಚಿತ್ರವತ್ತಾಗಿರುವ ಬೆಟ್ಟಸಾಲಿನ ದೃಶ್ಯಗಳು ರೀಲುರೀಲಾಗಿ ತೆರೆದುಕೊಳ್ಳುತ್ತವೆ. ಕಣಿವೆಯಲ್ಲಿ ಜುಳುಜುಳು ನಿನಾದ ಕಿವಿಗಳಲ್ಲಿ ನಿನದಿಸುತ್ತಲೇ ಇದೆ. ಆಗ ಸ್ವಾಮಿರಾಮ್ ಅವರÀ ‘ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ’ ಕೃತಿಯಲ್ಲಿ ಕಾಣಿಸಿರುವ ಹಿಮಾಲಯ ಬೆಟ್ಟಸಾಲಿನಲ್ಲಿ ಮಹಾತ್ಮರು ತಪಸ್ವಿಗಳು ಸಾಧುಸಂತರು, ಅವರ ಅಧ್ಯಾತ್ಮ ಜೀವನ, ವಾಸಿಸುತ್ತಿದ್ದ ಗುಹೆಗಳು, ನಡೆದಾಡಿದ್ದ ತಾಣಗಳನ್ನು ಗಿಡ ಮರ […]
-ರೇವು ಸೂರ್ಯ ನಿರ್ದೇಶಕಿಯ ಜಾಣ್ಮೆಯೊಂದು ನಮ್ಮನ್ನು ಆಕರ್ಷಿಸುತ್ತದೆ. ಮಾರ ಮತ್ತು ಸುಂದರಿಯ ಆತ್ಮಗೌರವದ ಮದುವೆ ‘ಮಂತ್ರ ಮಾಂಗಲ್ಯ’ ಮಾದರಿಯಲ್ಲಿ ಆಗುತ್ತದೆ. ಮದುವೆಯ ಬ್ಯಾನರ್ ನಲ್ಲಿ ತಮಿಳು ವರ್ಷನ್ ನಲ್ಲಿ ಪೆರಿಯಾರ್ ಫೋಟೋ ಬಳಸಿದ್ದರೆ, ಕನ್ನಡ ಡಬ್ನಲ್ಲಿ ಕುವೆಂಪು ಫೋಟೋ ಬಳಸಿರುವುದು ಕನ್ನಡಿಗರಿಗೆ ಮೆಚ್ಚುಗೆಯಾಗಿದೆ. ಒಟಿಟಿ ವೇದಿಕೆಯು ಚಿತ್ರಮಂದಿರ ನೀಡುವ ಸುಖವನ್ನು ನೀಡುವುದಿಲ್ಲ ಎಂಬ ಕೊರಗಿನ ನಡುವೆಯೇ ಅದೇ ವೇದಿಕೆಗಳಲ್ಲಿ ಜನ ಹೆಚ್ಚೆಚ್ಚು ಸಿನಿಮಾಗಳನ್ನು ನೋಡಬೇಕಾದ, ಒಟಿಟಿಗಳಲ್ಲೇ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಬೇಕಾದ ಕೊರೊನಾ ಕಾಲಘಟ್ಟದ ಅಂತಿಮ ಹಂತದಲ್ಲಿದ್ದೇವೆ. […]
-ಚನ್ನಪ್ಪ ಅಂಗಡಿ ಅಂಗಳದಲಿ ಆಡುವ ಮಗುವಿಗೆ ಮಣ್ಣು ಕಂಡು ಹಿಗ್ಗು ತೋರಬಹುದು ತೂರಬಹುದು ಬೆರಳಿನಿಂದ ಗೀರಬಹುದು ಉರುಳಿ ಬಿದ್ದರೆ ನೆಲದ ಮಣ್ಣು ಅರಳಿ ನಿಂತರೆ ಮಣ್ಣಿನ ಕಣ್ಣು ಬೆರಳು ಗೀಚಿದಂತೆ ಗೆರೆ ನಾಲಿಗೆ ಉಲಿದಂತೆ ಕರೆ ತಿರುಗಿ ಜರುಗಿ ಮನುಷ್ಯಾಕೃತಿ ತಪ್ಪೆಜ್ಜೆಯಲೂ ಒಪ್ಪಗೆರೆ ಗೀಚಲು ಬದ್ಧ ಸಡಿಲ ಗೆರೆಯ ನಗುವ ಮೊಗದ ಚಿತ್ರ ಸಿದ್ಧ – ಆತ ಬುದ್ಧ ತಣ್ಣಗಿನ ದಿಟ್ಟಿಗೆ ಕಮಟು ಹತ್ತಿದ ಯಜ್ಞಜ್ವಾಲೆ ನಂದಿಸಿ ನಗುವ ಮುತ್ತಹನಿ ಸುರಿದು ಬೆಂಕಿ ಝಳವ ಕುಂದಿಸಿ […]
-ಡಾ.ಚಂದ್ರಕಲಾ ಹೆಚ್.ಆರ್. ಇದು ಶಾಸ್ತ್ರಗ್ರಂಥವಾಗಿದ್ದರೂ ಕಾವ್ಯಲಕ್ಷಣಗಳನ್ನು ಪ್ರತಿಧ್ವನಿಸುತ್ತದೆ. ಗಾದೆ, ಉಪಮೆಗಳು, ಒಗಟು ಯಥೇಚ್ಛವಾಗಿವೆ. ಜೈನ ಮತೀಯ ಗ್ರಂಥವಾದರೂ ಪರಮತ ಸಹಿಷ್ಣುತೆ, ವಿಶಾಲದೃಷ್ಟಿ ಕಂಡುಬರುತ್ತದೆ. ವೃತ್ತ, ಕಂದ, ಗದ್ಯ, ರಗಳೆ ರಚನೆಯಲ್ಲಿದೆ. ಗಾದೆಗಳು, ಪಡೆನುಡಿಗಳು ಬೆರೆತ ಕಾವ್ಯಶೈಲಿಯಿದೆ. ಹನ್ನೆರಡನೆಯ ಶತಮಾನವನ್ನು ಸುವರ್ಣ ಕಾಲಘಟ್ಟವೆಂದು ಪರಿಭಾವಿಸುವುದಕ್ಕೆ ಶಿವಶರಣರ ವಚನ ಸಾಹಿತ್ಯವು ಸಾಮಾಜಿಕ ಮತ್ತು ಸಾಂಸ್ಕøತಿಕ ಪಲ್ಲಟಗಳನ್ನು ಕನ್ನಡನಾಡಿನ ಬದುಕಿನಲ್ಲಿ ದಾಖಲಿಸಿದ ಕಾರಣ ಮತ್ತು ಧರ್ಮದ ಪರಿಕಲ್ಪನೆಗೆ ಹೊಸ ವ್ಯಾಖ್ಯಾನವನ್ನು ಬರೆದ ಕಾರಣವೂ ಆಗಿದೆ. ವೀರಶೈವಧರ್ಮ ಜನಸಾಮಾನ್ಯರನ್ನು ಎಲ್ಲಾ ತಾರತಮ್ಯಗಳಿಂದ ಬಿಡುಗಡೆಗೊಳಿಸಲು […]