ಹಿಂದೆ ಹಳ್ಳಿಗಳಲ್ಲಿ ಹಲವಾರು ಕಾಂಗ್ರೆಸ್ ಮನೆತನಗಳನ್ನು ಕಾಣಬಹುದಿತ್ತು. ಈ ಕುಟುಂಬಗಳ ಸದಸ್ಯರಿಗೆ ಕಾಂಗ್ರೆಸ್ ಜೊತೆಗೆ ತಲೆಮಾರುಗಳ ಅಚಲ ನಂಟು, ನಿಷ್ಠೆ. ಅವರ ಪಾಲಿಗೆ ಸ್ವಾತಂತ್ರ್ಯ, ದೇಶಪ್ರೇಮ ಮತ್ತು ಕಾಂಗ್ರೆಸ್ ಒಲವು ಬೇರೆಬೇರೆ ಆಗಿರಲಿಲ್ಲ. ನಮ್ಮೂರಲ್ಲಿ ನಮ್ಮದೂ ಅಂತಹದೇ ಮನೆತನ. ಆಗ ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಎಂ.ವೈ.ಘರ್ಪಡೆ ಅವರೇ ಖಾಯಂ ಹುರಿಯಾಳು, ಗೆಲುವು ಅವರಿಗೇ ಮುಡುಪು. ಸಂಡೂರು ಸಂಸ್ಥಾನದ ಮಾಜಿ ಅರಸು, ಪ್ರಜಾತಂತ್ರ ವ್ಯವಸ್ಥೆಯ ಪ್ರತಿನಿಧಿ ಘರ್ಪಡೆ ತಮ್ಮ ತಂಡದೊಂದಿಗೆ ನಮ್ಮ ಮನೆಗೆ ಬಂದರೆ ಅವರಿಗೆ ಉಪ್ಪಿಟ್ಟು […]
ಕಾಪಿರೈಟ್ ಪ್ರಶ್ನೆ ಅಲ್ಲ! -ಎಚ್.ಎಸ್.ದೊರೆಸ್ವಾಮಿ, ಬೆಂಗಳೂರು. ಬಹುರಾಷ್ಟಿಯ ಕಂಪನಿಗಳನ್ನು ಭಾರತಕ್ಕೆ ಬರಮಾಡಿಕೊಂಡ ದಿನದಿಂದ ನಾನು ಅವುಗಳ ವಿರುದ್ಧ ಮತ್ತು ಸರ್ಕಾರದ ನೀತಿಯ ವಿರುದ್ಧ ಬರೆದಿದ್ದೇನೆ, ಚಳವಳಿಗಳನ್ನು ಮಾಡಿದ್ದೇನೆ. ಗ್ಯಾಟ್ ಒಪ್ಪಂದಕ್ಕೆ ಪಾರ್ಲಿಮೆಂಟ್ ಒಪ್ಪಿಗೆ ಪಡೆಯದೆ ಪಿ.ವಿ.ನರಸಿಂಹರಾಯರು ಸಹಿ ಹಾಕಿ ಬಂದದ್ದನ್ನು ಕುರಿತು ಟೀಕೆ ಮಾಡಿದ್ದೇನೆ. ರೈತರು ಬಿತ್ತನೆ ಬೀಜ ತಯಾರಿಸಬಾರದು; ಬಹುರಾಷ್ಟಿಯ ಕಂಪೆನಿ ಕೊಟ್ಟ ಬೀಜವನ್ನೇ ಬಿತ್ತನೆಗೆ ಬಳಸಬೇಕು, ಬಿತ್ತನೆ ಬೀಜವನ್ನು ರೈತ ಮಾಡಿಕೊಂಡರೆ ಆತನಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಆದೇಶ ಇತ್ತು. ಈ ಬಿತ್ತನೆ ಬೀಜ […]
-ಡಾ.ಪ್ರವೀಣ ಟಿ.ಎಲ್. ಸಾಮಾಜಿಕ ಸಂಶೋಧನೆಗಳ ಚಿಂತಾಜನಕ ಸ್ಥಿತಿಗೆ ಇರಬಹುದಾದ ಕಾರಣಗಳನ್ನು ಗುರುತಿಸುವುದು ನಮ್ಮ ಪ್ರಾಥಮಿಕ ಜವಾಬ್ದಾರಿ. ಪ್ರಸ್ತುತ ಬರಹವು ಸಾಮಾಜಿಕ ಸಂಶೋಧನೆಗಳ ವರ್ತಮಾನ ಮತ್ತು ಭವಿಷ್ಯದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಭಾರತೀಯ ಸಾಮಾಜಿಕ ಸಂಶೋಧನೆಯ ಸ್ಥಿತಿಗತಿ ಕುರಿತು ಚರ್ಚೆ ಬಹಳ ಹಿಂದಿನಿದಲೂ ನಡೆಯುತ್ತಲೇ ಬಂದಿದೆ. ಸಂಶೋಧನೆಯ ಗುಣಮಟ್ಟ ಕುಸಿಯುತ್ತಿದೆ ಎಂದು ಅನೇಕ ವಿದ್ವಾಂಸರು, ಸಮಿತಿಗಳು ಅಭಿಪ್ರಾಯ ಪಡುತ್ತಲೇ ಬಂದಿವೆ. ಹಾಗೆಯೇ ಒಂದಷ್ಟು ಕಾರಣಗಳನ್ನು ಗುರುತಿಸಲು ಈ ಹಿಂದೆಯೇ ಪ್ರಯತ್ನಿಸಿವೆ ಕೂಡ: ಮೇಲ್ವಿಚಾರಕರ ಸಮಸ್ಯೆ; ಸಂಶೋಧಕರ […]
-ಡಾ.ಎಂ.ಜಿ.ಬಸವರಾಜ ಸರ್ಕಾರಿ ವಿಶ್ವವಿದ್ಯಾಲಯಗಳ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರಲು ಸಾಧ್ಯವಿದೆ. ಪ್ರತಿಭಾವಂತರು ಎಲ್ಲ ಜಾತಿಗಳಲ್ಲೂ ಇದ್ದಾರೆ. ಉನ್ನತ ಶೈಕ್ಷಣಿಕ ಪ್ರತಿಭೆಯ ಪ್ರಾಧ್ಯಾಪಕರನ್ನು ಮಾತ್ರ ವಿಶ್ವ ವಿದ್ಯಾಲಯಗಳು ಆಯ್ಕೆ ಮಾಡಿಕೊಳ್ಳಬೇಕು. ಶೈಕ್ಷಣಿಕ ಪ್ರಗತಿ/ಪ್ರತಿಭೆ ಆಧಾರಗಳ ಮೇಲೆ ಸಂಶೋಧನಾ ಮಾರ್ಗದರ್ಶಕರನ್ನು ಆಯ್ಕೆ ಮಾಡಬೇಕು. ಸಂಶೋಧನಾ ವಿದ್ಯಾರ್ಥಿಗಳ ಆಯ್ಕೆಯಲ್ಲೂ ಇದನ್ನು ಅನುಸರಿಸಬೇಕು. ಸಂಶೋಧನಾ ಉತ್ಕೃಷ್ಟತೆಯಲ್ಲಿ ವಿಫಲರಾದವರನ್ನು ಖಾಲಿ ಮಾಡಿಸಬೇಕು. ಕರ್ನಾಟಕ ಕುರಿತ ಜ್ಞಾನ ಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರುವುದು ಹೇಗೆ? ಎಂಬ ಚರ್ಚೆಯ ವಿಷಯ ಸಮಕಾಲೀನ ಪ್ರಸ್ತುತತೆಯನ್ನು ಹೊಂದಿದೆ. ಕಾರಣ ಸ್ಪಷ್ಟ. ಇಂದಿನ […]
-ದೇವನೂರು ನಂದೀಶ ಪಿ.ಎಚ್.ಡಿ. ಅಧ್ಯಯನ ಮಾಡುವವರಿಗೆ ನಾಮಕಾವಸ್ಥೆ ಮಾರ್ಗದರ್ಶಕರನ್ನು ಒದಗಿಸುವ ಬದಲು ಸಂಶೋಧನಾ ಅಭ್ಯರ್ಥಿಯ ಅರ್ಹತೆ, ಅನುಭವ ಮತ್ತು ಬೇಡಿಕೆಗಳಿಗುಣವಾಗಿ ಮಾರ್ಗದರ್ಶಕರ ಹಸ್ತಕ್ಷೇಪಗಳಿಲ್ಲದ ಸ್ವತಂತ್ರ ಸಂಶೋಧನಾ ಪಿಎಚ್.ಡಿ. ಕೋರ್ಸ್ ಒಂದಕ್ಕೆ ಆದ್ಯತೆ ನೀಡಬೇಕು. ಪಶ್ಚಿಮದ ದೇಶಗಳಲ್ಲಿ ಇಂತಹ ಮಾದರಿಗಳು ಈಗಾಗಲೇ ಜಾರಿಯಲ್ಲಿವೆ. ಇಂದು ಎಷ್ಟೋ ಸಂಶೋಧಕರು ಯು.ಜಿ.ಸಿ. ಕೊಡಮಾಡುವ ವಿವಿಧ ಧನ ಸಹಾಯ ಪಡೆದು ಆ ಸಂಶೋಧನಾ ವೇತನಗಳ ಅರ್ಹತೆಯ ಆಧಾರದ ಮೇರೆಗೆ ವಿಶ್ವವಿದ್ಯಾಲಯಗಳಲ್ಲಿ ಗೊತ್ತುಮಾಡಿದ ಮಾರ್ಗದರ್ಶಕರ ಬಳಿ ಮುಗಿಬೀಳುತ್ತಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣ ಯು.ಜಿ.ಸಿ.ಯ ಸಂಶೋಧನಾ […]
-ಎಂ.ಕುಸುಮ ನಮ್ಮ ವಿಶ್ವವಿದ್ಯಾಲಯಗಳ ‘ಸಾಪ್ಟ್ವೇರ್’ಗಳು ಸರಿಯಾಗಿಯೇ ಇವೆ; ಆಡಳಿತಾತ್ಮಕ ‘ಹಾರ್ಡ್ವೇರ್’ ಸರಿಯಾಗಿಡುವುದು ಸರ್ಕಾರದ ಜವಾಬ್ದಾರಿ! ರೋಗ ನಿವಾರಣೆಗೆ, ರೋಗಮೂಲವನ್ನು ಪತ್ತೆ ಹಚ್ಚಿ, ಪರಿಹಾರವನ್ನು ಕಂಡುಕೊಳ್ಳುವುದು ಎಷ್ಟು ಮುಖ್ಯವೋ ಹಾಗೆ, ವಿಶ್ವವಿದ್ಯಾಲಯಗಳ ಪಿ.ಹೆಚ್.ಡಿ ಮಟ್ಟವನ್ನು ಉನ್ನತೀಕರಿಸಲು ಶಾಲಾ-ಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ದೃಷ್ಟಿಕೋನವನ್ನು ಬೆಳೆಸುವುದು ಅಷ್ಟೇ ಮುಖ್ಯ. ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ಸರಿ-ತಪ್ಪುಗಳನ್ನು ಅವಲೋಕಿಸುವ ಸ್ಥೈರ್ಯವನ್ನು ತುಂಬಬೇಕಿದೆ. ನಮ್ಮ ರಾಜ್ಯ, ಜಿಲ್ಲೆ, ಊರಿನ ವಿಶೇಷತೆ, ಅಲ್ಲಿನ ನದಿ, ಅಣೆಕಕಟ್ಟು, ಕಾರ್ಖಾನೆ, ಸ್ಮಾರಕ ಇತ್ಯಾದಿಗಳ ಕುರಿತು ಯುವಜನರಿಗೆ […]
-ಮೋಹನದಾಸ್ ಸತ್ತಂತಿಹರನು ಬಡಿದೆಚ್ಚರಿಸುವುದಕ್ಕಿಂತಲೂ ಹೊಸದಾದ ಪರ್ಯಾಯವೊಂದನ್ನು ಸೃಷ್ಟಿಮಾಡುವ ಅವಕಾಶವೇ ನಮಗೆ ಆಕರ್ಷಕವಾಗಿ ಕಾಣಬಹುದು. ನವೆಂಬರ್ ಸಂಚಿಕೆಯಲ್ಲಿ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರುವುದು ಹೇಗೆ ಎಂಬ ಕುರಿತು ಪ್ರಕಟವಾಗಿರುವ ಎಲ್ಲ ಬರಹಗಳೂ ಪಾಂಡಿತ್ಯಪೂರ್ಣವಾಗಿವೆ. ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪಿಹೆಚ್ಡಿ ಸಂಶೋಧನೆಗಳ ಗುಣಮಟ್ಟದ ಅವನತಿಯ ಬಗ್ಗೆ ಎಲ್ಲ ಲೇಖಕರೂ ಒಕ್ಕೊರಲಿನಿಂದ ದನಿಗೂಡಿಸಿದ್ದಾರೆ. ‘ಸತ್ತಂತಿಹರನು ಬಡಿದೆಚ್ಚರಿಸು’ ಎಂಬ ಶೀರ್ಷಿಕೆಗೆ ಅನ್ವರ್ಥವಾಗುವಂತೆ ‘ಬೀಟಿಂಗ್ ಎ ಡೆಡ್ ಹಾರ್ಸ್’ ಎಂಬ ಪದಪುಂಜದ ಬಳಕೆಯಲ್ಲಿ ವಿವಿಗಳಲ್ಲಿ ಸಂಶೋ ಧನೆಯ ಸ್ಥಿತಿಗತಿ ಎಲ್ಲರಿಗೂ ಮನವರಿಕೆಯಾಗುತ್ತಿದೆ. ನಾವು ಆಡುಬಳಕೆಯ ಮಾತಿನಲ್ಲಿ […]
-ಡಿ.ಉಮಾಪತಿ ತೇಜಸ್ವಿ ಯಾದವ್ ಮುಂಬರುವ ದಿನಗಳ ರಾಜಕಾರಣದಲ್ಲಿ ಗಮನಿಸಬೇಕಾದ ಪ್ರತಿಭೆ ಎಂಬುದನ್ನು ರುಜುವಾತು ಮಾಡಿ ತೋರಿದ್ದಾರೆ. ಗೆಲುವಿನ ಗೆರೆಯ ಬಳಿ ಸಾರಿ ಕಾಲು ಸೋತ ಸಾರಥಿ ತೇಜಸ್ವಿ. ಚುನಾವಣಾ ಸಮೀಕ್ಷೆಗಳು ಮತ್ತು ಮತಗಟ್ಟೆ ಸಮೀಕ್ಷೆಗಳನ್ನು ಸುಳ್ಳು ಮಾಡಿರುವ ಬಿಹಾರ ವಿಧಾನಸಭಾ ಚುನಾವಣೆ ಪ್ರತಿಸ್ಪರ್ಧಿಗಳನ್ನು ಸೋಲು ಗೆಲುವುಗಳ ನಡುವೆ ತೂಗುಯ್ಯಾಲೆ ಆಡಿಸಿತು. ಆರಂಭದಲ್ಲಿ ಎನ್.ಡಿ.ಎ.ಗೆ ಭಾರೀ ಗೆಲುವಿನ ಭವಿಷ್ಯ ನುಡಿದು, ಮತಗಟ್ಟೆ ಸಮೀಕ್ಷೆಗಳಲ್ಲಿ ಮಹಾಮೈತ್ರಿಗೆ ವಿಜಯಮಾಲೆ ಹಾಕಿದ್ದ ಸಮೀಕ್ಷೆಗಳು ಹುಸಿಯಾದವು. ಸೋಲು ಗೆಲುವುಗಳು ಕೂದಲೆಳೆಯ ಅಂತರದಿAದ ತೀರ್ಮಾನವಾದವು. ಒಂದೆಡೆ […]
-ಪ್ರತಾಪ್ ಭಾನು ಮೆಹ್ತಾ ಅನುವಾದ: ನಾ ದಿವಾಕರ ಪ್ರಜಾತಾಂತ್ರಿಕ ಬರ್ಬರತೆಯ ವಾತಾವರಣದಲ್ಲಿ ಪ್ರತಿಯೊಂದು ವಿಚಾರವನ್ನೂ ಪಕ್ಷಪಾತೀಯ ನೆಲೆಯಲ್ಲಿ ನೋಡಲಾಗುವುದೇ ಹೊರತು ತರ್ಕಬದ್ಧತೆಯಿಂದಲ್ಲ. ನ್ಯಾಯಾಂಗವು ಈ ಧೋರಣೆಯನ್ನು ಮೀರಿ ನಿಂತಿದೆ ಎಂದು ತೋರಿಸಿಕೊಳ್ಳಲೂ ವಿಫಲವಾಗಿರುವುದರಿಂದ ನ್ಯಾಯಾಂಗದ ನಿಷ್ಕರ್ಷೆಯೂ ಇದಕ್ಕೆ ಪೂರಕವಾಗಿಯೇ ಕಂಡುಬರುತ್ತಿದೆ. ರಾಜ್ಯಶಾಸ್ತ್ರದ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಪ್ರಜಾಪ್ರಭುತ್ವದ ಬರ್ಬರತೆ ಎಂಬ ಪದವನ್ನು ಬಳಸಲಾಗುತ್ತದೆ. ಈ ಪ್ರಜಾಪ್ರಭುತ್ವದ ಬರ್ಬರತೆಯನ್ನು ನ್ಯಾಯಿಕ ಬರ್ಬರತೆಯು ಕಾಪಾಡಿಕೊಂಡುಬರುತ್ತದೆ. ಬರ್ಬರತೆಗೆ ಹಲವಾರು ಆಯಾಮಗಳಿವೆ. ಮೊದಲನೆಯದಾಗಿ ನ್ಯಾಯಾಂಗದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ, ತೀರ್ಪು ನೀಡುವಾಗ ನಿರಂಕುಶತೆ ಮೇಲುಗೈ ಸಾಧಿಸುತ್ತದೆ. […]
-ಪೃಥ್ವಿದತ್ತ ಚಂದ್ರಶೋಭಿ ನೆರೆಯ ತಮಿಳುನಾಡಿನ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಚಿತ್ರ ವಿವಾದ ಉದ್ಭವಿಸಿದೆ. ಅದರ ಕೇಂದ್ರದಲ್ಲಿ ಇರುವವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕರಾದ ಪ್ರೊ.ಎಂ.ಕೆ.ಸೂರಪ್ಪನವರು. ಅವರೀಗ ಚೆನ್ನೈನಲ್ಲಿರುವ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾನಿಲಯದ ಕುಲಪತಿಗಳು. ಈ ವಿಶ್ವವಿದ್ಯಾನಿಲಯಕ್ಕೆ ಉತ್ಕೃಷ್ಟ ಸಂಸ್ಥೆ ಸ್ಥಾನ ದೊರಕಿರುವುದೆ ವಿವಾದದ ಮೂಲ. ಪಳನಿಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಸೂರಪ್ಪನವರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ, ನ್ಯಾಯಾಂಗ ತನಿಖೆ ನಡೆಸಲು ಆದೇಶಿಸಿದೆ. ಜ್ಞಾನ ಸೃಷ್ಟಿ ಮತ್ತು ಪ್ರಸರಣಗಳೆರಡರಲ್ಲಿಯೂ ಸೋಲುತ್ತಿರುವ ಉನ್ನತ ಶಿಕ್ಷಣ […]
-ರಂಗನಾಥ ಕಂಟನಕು0ಟೆ ಹೊಸ ವಿಚಾರಗಳನ್ನು ಯೋಜನೆಗಳನ್ನು ರೂಪಿಸಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಅದರ ಭಾಗವಾಗಿ ಕೊರೊನೋತ್ತರ ಕಾಲದಲ್ಲಿ ಶಿಕ್ಷಣ ವ್ಯವಸ್ಥೆಯನ್ನೂ ಮುರಿದು ಕಟ್ಟಿ ಮುಂದಿನ ಜನಾಂಗಕ್ಕೆ ಸಜ್ಜುಗೊಳಿಸಿಕೊಡಬೇಕಿದೆ. ಕೊರೋನ ವೈರಾಣು ರೋಗ ಹಬ್ಬುವುದನ್ನು ನಿಯಂತ್ರಿಸಲು ಕಳೆದ ಮಾರ್ಚ್ ತಿಂಗಳಿನಲ್ಲಿ ಶಾಲಾ ಕಾಲೇಜುಗಳಿಗೆ ದಿಢೀರ್ ಆಗಿ ಮತ್ತು ಅನಿರ್ದಿಷ್ಟ ಕಾಲದವರೆಗೆ ಸರ್ಕಾರ ರಜೆ ಘೋಷಣೆ ಮಾಡಿತು. ನಂತರ ಉನ್ನತ ಶಿಕ್ಷಣ ಇಲಾಖೆ ಆನ್ಲೈನ್ ಮೂಲಕ ಬೋಧಿಸುವಂತೆ ಆದೇಶ ಹೊರಡಿಸಿತು. ಆ ಮೂಲಕ ಅಪೂರ್ಣವಾಗಿದ್ದ ಪಠ್ಯಗಳನ್ನು ಮುಗಿಸಲು ಆನ್ಲೈನ್ ಮೊರೆ […]
ಭಾರತದಂತಹ ದೊಡ್ಡ ಮತ್ತು ವೈವಿಧ್ಯಮಯ ದೇಶಕ್ಕೆ ಕನಿಷ್ಠ ಎರಡಾದರೂ ರಾಷ್ಟ್ರೀಯ ಪಕ್ಷಗಳು ಬೇಕು. ಕಳೆದ ಆರು ವರ್ಷಗಳಲ್ಲಿ ಬಿಜೆಪಿ ದೇಶದ ಮೂಲೆಮೂಲೆಗಳಲ್ಲಿಯೂ ಬೆಳೆದು ಅಗ್ರಗಣ್ಯ ರಾಷ್ಟ್ರೀಯ ಪಕ್ಷವಾದರೆ ಅದೇ ಸಮಯದಲ್ಲಿ ಇದುವರೆಗೂ ಸರ್ವಮಾನ್ಯ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ದೇಶದ ಹಲವು ಭಾಗಗಳಲ್ಲಿ ತನ್ನ ನೆಲೆ ಕಳೆದುಕೊಂಡಿದೆ. ಬಿಜೆಪಿಯ ಅಬ್ಬರದ ‘ಕಾಂಗ್ರೆಸ್ ಮುಕ್ತ ಭಾರತ’ದ ಪ್ರಚಾರದಲ್ಲಿ ತನ್ನ ರಾಷ್ಟ್ರೀಯ ಸ್ಥಾನಮಾನ ಕಳೆದುಕೊಳ್ಳುವ ಭಯದಲ್ಲಿದೆ. ನಾಯಕತ್ವದ ಬಿಕ್ಕಟ್ಟು, ಕೌಟುಂಬಿಕ ಪಾರುಪತ್ಯ, ದೂರದೃಷ್ಟಿಯ ಕೊರತೆ, ರಾಜಕೀಯ ಮುತ್ಸದ್ದಿತನದ ಅಭಾವ ಮತ್ತು ಸಂಪನ್ಮೂಲದ […]
-ಸುಧೀಂದ್ರ ಕುಲಕರ್ಣಿ ಇಂದು ಕೇವಲ ಕಾಂಗ್ರೆಸ್ ಪಕ್ಷ ಸಂಕಟಗ್ರಸ್ತವಾಗಿಲ್ಲ. ಭಾರತೀಯ ಪ್ರಜಾಪ್ರಭುತ್ವದ ಕಟ್ಟಡಕ್ಕೇನೇ ಬಿರುಕು ಬೀಳುತ್ತಿದೆ. ಇದೆಲ್ಲವೂ ಏಕೆ, ಹೇಗೆ ಆಗುತ್ತಿದೆ? ಇದನ್ನು ತಪ್ಪಿಸಲು, ಸರಿಪಡಿಸಲು ನಾಗರಿಕರ ಜವಾಬ್ದಾರಿ ಏನು? ಬಹುಪಕ್ಷೀಯ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳ ಸ್ಥಿತಿಗತಿ ಬದಲಾಗುತ್ತಲೇ ಇರುತ್ತದೆ. ಇಂದು ಅಧಿಕಾರದಲ್ಲಿ, ನಾಳೆ ಅಧಿಕಾರದ ಹೊರಗಡೆ ಈ ಬದಲಾವಣೆ ನಡೆಯುತ್ತಲೇ ಇರುತ್ತದೆ. ಯಾವ ಪಕ್ಷವೂ, ಯಾವ ನಾಯಕನೂ ಶಾಶ್ವತವಾಗಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ. ಆದರೆ, ಪ್ರಜಾಪ್ರಭುತ್ವದ ಸಂರಚನೆ ಸುಭದ್ರವಾಗಿದ್ದರೆ ವಿವಿಧ ಪಕ್ಷಗಳ ಸ್ಥಾನಮಾನದಲ್ಲಿ ಏರುಪೇರುಗಳಾದರೂ ಕೂಡ ದೇಶದ […]
-ಡಿ.ಎಸ್.ನಾಗಭೂಷಣ ‘ಕಾಂಗ್ರೆಸ್ಮುಕ್ತ್ತ ಭಾರತ’ ಎಂಬ ಘೋಷಣೆ ಈಗ ಘೋಷಣೆಯಾಗಿ ಉಳಿಯದೆ ಒಂದು ರಾಜಕೀಯ ಕಾರ್ಯಕ್ರಮವಾಗಿ ನೇರ ಮತ್ತು ವಕ್ರ ಮಾರ್ಗಗಳ ಮೂಲಕ ಜಾರಿಗೆ ಬರುತ್ತಿದೆ. ಅದು ಸಂಪೂರ್ಣ ಯಶಸ್ವಿಯಾಗಬಲ್ಲದೆಂಬ ವಿಶ್ವಾಸ ಭಾಜಪಕ್ಕೂ, ನಂಬಿಕೆ ಸಾರ್ವಜನಿಕರಿಗೂ ಬಂದಿದೆ. ಈ ಕಾರ್ಯಕ್ರಮ ಕೇವಲ ಭಾಜಪದ್ದಾಗಿರದೆ ಸ್ವತಃ ಕಾಂಗ್ರೆಸ್ಸಿನದೇ ಆಗಿರುವಂತೆ ಕಾಣುತ್ತಿದೆ! ಭಾರತೀಯ ಜನತಾ ಪಕ್ಷದ ‘ಕಾಂಗ್ರೆಸ್ಮುಕ್ತ ಭಾರತ’ ಎಂಬ ರಾಜಕೀಯ ಘೋಷಣೆ ಆ ಪಕ್ಷದ ಹೊಸ ಘೋಷಣೆಯೇನೂ ಅಲ್ಲ. ಈ ಪಕ್ಷ ಮೂಲತಃ ಭಾರತೀಯ ಜನಸಂಘವಾಗಿ ಹುಟ್ಟಿಕೊಳ್ಳಲು ಪ್ರೇರಣೆ ನೀಡಿದ […]
-ಡಾ.ಬಿ.ಎಲ್.ಶಂಕರ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾರ್ಯಕರ್ತರು, ಮುಖಂಡರು ಮತ್ತು ಸಂಘಟನೆಯನ್ನು ಹೊಂದಿರುವ ಕಾಂಗ್ರೆಸ್ಸಿಗೆ ಪಕ್ಷವನ್ನು ಮರಳಿ ಹಳಿಗೆ ತರುವುದು ದೊಡ್ಡ ಸವಾಲೇನಲ್ಲ. ಆದರೆ, ಎಲ್ಲಿಂದ ಆರಂಭಿಸುವುದೆಂಬುದೇ ಚಿದಂಬರ ಪ್ರಶ್ನೆ! ಒಂದು ಕಾಲದಲ್ಲಿ ರಾಷ್ಟ್ರೀಯ ಪಕ್ಷಗಳಲ್ಲಿ ಬಹಳ ಪ್ರಬಲರಾದ ಪ್ರಾದೇಶಿಕ ನಾಯಕರು ಇರುತ್ತಿದ್ದರು. ವ್ಯಾಪಕ ಜನಮನ್ನಣೆ ಪಡೆದಿದ್ದುದರ ಜೊತೆಗೆ ಸ್ಥಳೀಯರ ಭಾವನೆಗಳಿಗೆ ಸ್ಪಂದಿಸಿ ಕಾರ್ಯಕ್ರಮ ರೂಪಿಸುವ ಸಾಮರ್ಥ್ಯ ಪಡೆದಿದ್ದರು. ಕ್ರಮೇಣ ನಾನಾ ಕಾರಣಗಳಿಂದ ಅನೇಕ ರಾಜ್ಯಗಳಲ್ಲಿ ಇಂತಹ ಪ್ರಭಾವಶಾಲಿ ನಾಯಕರು ರಾಷ್ಟ್ರೀಯ ಪಕ್ಷಗಳ ಮುಖ್ಯವಾಹಿನಿಯಿಂದ ದೂರವಾಗಿ, ಜಾತಿ, ಮತ, ಪ್ರದೇಶ, […]
-ಸುಧೀಂದ್ರ ಬುಧ್ಯ ಈಗಿನ ಸನ್ನಿವೇಶದಲ್ಲಿ ಕಾಂಗ್ರೆಸ್ ಪುನರುಜ್ಜೀವನ ಸಾಧ್ಯವೇ? ರಾಜಕಾರಣದಲ್ಲಿ ಎಲ್ಲವೂ ಸಾಧ್ಯವಾದ್ದರಿಂದ ಕಾಂಗ್ರೆಸ್ ವಿಷಯದಲ್ಲಿ ಪುನರುಜ್ಜೀವನ ಅಸಾಧ್ಯ ಎನ್ನುವಂತಿಲ್ಲ. ಆದರೆ ರಾಹುಲ್ ಗಾಂಧೀ ನಾಯಕತ್ವ ಮುಂದುವರೆದರೆ ಹಾದಿ ಕಠಿಣವೇ! ಮೊದಲಿಗೆ ಒಂದು ಸಂಗತಿಯನ್ನು ಸ್ಪಷ್ಟಪಡಿಸಿಕೊಳ್ಳೋಣ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ ಒಂದು ಪಕ್ಷ ಅಥವಾ ಒಂದು ಸಿದ್ಧಾಂತಿಗಳ ಗುಂಪು ಹೆಚ್ಚಿನ ಬಲ ಪಡೆದುಕೊಂಡು, ಬದಲಿ ಆಯ್ಕೆ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿಬಿಟ್ಟರೆ ಅಂತಹ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ. ಹಾಗಾಗಿ ಭಾರತದ ಮಟ್ಟಿಗೆ ಕೇವಲ ಬಿಜೆಪಿ ರಾಷ್ಟçವ್ಯಾಪಿ […]
ರಾಮಚಂದ್ರ ಗುಹಾ ಪ್ರಸ್ತುತ ಸರಕಾರದ ವಿರೋಧಿಗಳೆಲ್ಲಾ ಮನಗಾಣಬೇಕಾದ ಕಟುಸತ್ಯವೆಂದರೆ, ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯಾಗಿ ಪ್ರಸ್ತುತಪಡಿಸಿದರೆ, ನರೇಂದ್ರ ಮೋದಿ ಮತ್ತು ಬಿಜೆಪಿಯ ಕೈ ಭದ್ರಪಡಿಸಿದ ಹಾಗೆ! ಪ್ರಾಸ್ತಾವಿಕವಾಗಿ ಹೇಳುವುದಾದರೆ, ಹಿಂದುತ್ವವನ್ನು ವಿರೋಧಿಸು ವವರು, ಪ್ರಸಕ್ತ ವ್ಯವಸ್ಥೆಯಲ್ಲಿ ನಿಶ್ಶಕ್ತವಾಗುತ್ತಿರುವ ದೇಶದ ಸ್ವಾತಂತ್ರ÷್ಯ ಹೋರಾಟದ ಮೂಲ ತತ್ವಗಳಾದ ಧಾರ್ಮಿಕ ಮತ್ತು ಭಾಷಾ ಬಹುತ್ವ, ಜಾತಿ ಮತ್ತು ಲಿಂಗ ಸಮಾನತೆ, ಅಭಿವ್ಯಕ್ತ ಸ್ವಾತಂತ್ರ÷್ಯ, ಬಹುತ್ವ ಸಂಸ್ಕೃತಿ ಮತ್ತು ನಾಗರಿಕತೆಗಳಿಗೆ ಇರಬೇಕಾದ ಮುಕ್ತತೆಯನ್ನು ಕೂಡ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, 2024ರ ಮಹಾ ಚುನಾವಣೆ […]
-ರಾಜಮೋಹನ್ ಗಾಂಧಿ ಇಂದು ಆಡಲು ಪಿಚ್ ಕಠಿಣವಾಗಿದೆ, ಬೆಳಕು ಮಂದವಾಗಿದೆ, ಬಿರುಗಾಳಿ ಮತ್ತು ಜಡಿಮಳೆ ಬೀಸುತ್ತಿದೆ, ಮತ್ತು ಅಂಪೈರ್ಗಳು ಎಷ್ಟು ನಿಷ್ಪಕ್ಷಪಾತರು ಎಂಬುದು ಕೂಡ ಸ್ಪಷ್ಟವಾಗಿಲ್ಲ. ಆದರೂ, ರಾಹುಲ್ ಗಾಂಧಿ ಧೈರ್ಯವಾಗಿ ಆಡುತ್ತಿದ್ದಾರೆ. ಅದಕ್ಕಾಗಿ, ಅವರಿಗೆ ನನ್ನ ಅಭಿನಂದನೆಗಳು. ರಾಮಚoದ್ರ ಗುಹಾ ಒಬ್ಬ ಪ್ರತಿಭಾನ್ವಿತ ಇತಿಹಾಸಕಾರ ಮತ್ತು ವಿಶ್ಲೇಷಣೆಕಾರ. ಜೊತೆಗೆ, ನನ್ನ ಒಳ್ಳೆಯ ಸ್ನೇಹಿತ ಕೂಡ. ಆದ್ದರಿಂದ, ಅವರು ಬರೆದಿರುವ ಲೇಖನದಲ್ಲಿ, ಮುಂದಿನ ರಾಷ್ಟ್ರವ್ಯಾಪಿ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಎದುರಾಳಿಯಾಗಿ ನಿಲ್ಲಲು ರಾಹುಲ್ ಗಾಂಧಿ ಸಮರ್ಥರಲ್ಲ ಎನ್ನುವುದಕ್ಕೆ […]
-ಡಾ.ವಾಮನ ಆಚಾರ್ಯ, ಬಿಜೆಪಿ ಚಿಂತಕರು. ವಿರೋಧ ಪಕ್ಷ ಇರಬೇಕು. ಇಲ್ಲದಿದ್ದರೆ ಬಿಜೆಪಿಯೂ ಹಾಗೇ ಆಗುತ್ತದೆ. ಕಾಂಗ್ರೆಸ್ ನ ಅಪ್ರೋಚ್ ನಲ್ಲಿ ಬದಲಾವಣೆ ಆಗಬೇಕೆಂಬುದು ಇದರರ್ಥ. ಏಕೆಂದರೆ ಪಕ್ಷದ ಚುಕ್ಕಾಣಿ ಕೆಲವೇ ಕೆಲವರ ಕೈಲಿದೆ. ವಂಶಪಾರOಪರ್ಯ ಎದ್ದು ಕಾಣುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಿಯಲ್ ಡೆಮೋಕ್ರಸಿ ಇಲ್ಲ. ಇಂಟರ್ನಲ್ ಡೆಮೋಕ್ರಸಿ ಇಲ್ಲ. ಸ್ಥಳೀಯ ಮಟ್ಟದ ಚುನಾವಣೆ ಪದ್ಧತಿ ಅವರಲ್ಲಿಲ್ಲ. ಪಿಕ್ ಅಂಡ್ ಚೂಸ್. ಅಲ್ಪಸಂಖ್ಯಾತರನ್ನು ಮಾತ್ರ ತುಷ್ಟೀಕರಣ ಮಾಡುತ್ತಿದ್ದಾರೆ. ಈ ಮೂಲಕ ಇಂತಹ ಸಮುದಾಯಗಳನ್ನು ಸಮಾಜದ […]
-ವಿ.ಆರ್.ಸುದರ್ಶನ್, ಮಾಜಿ ಸಭಾಪತಿಗಳು. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂಬುದು ಒಂದು ರಾಜಕಾರಣದ ಭಾಷೆಯೇ ಹೊರತು ಪ್ರಜಾಪ್ರಭುತ್ವದ ಭಾಷೆಯಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ತಮ್ಮದೇ ಆದ ವಿಚಾರಧಾರೆಗಳು, ಸಿದ್ಧಾಂತಗಳು ಮತ್ತು ಅಸ್ತಿತ್ವ ಇರುತ್ತದೆ. ಆಡಳಿತ ಪಕ್ಷ ಎಷ್ಟು ಮುಖ್ಯವೋ ವಿರೋಧ ಪಕ್ಷವೂ ಅಷ್ಟೇ ಮುಖ್ಯವಾಗಿರುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿರೋಧ ಪಕ್ಷವೆಂದರೆ ಅದು ಜನರ ಧ್ವನಿಯಾಗಿರುತ್ತದೆ. ಆಡಳಿತ ಪಕ್ಷದ ಜವಾಬ್ದಾರಿ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸುವುದಾಗಿದೆ. ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುತ್ತೇವೆ ಎಂಬುದು ಅಥವಾ ಬಿಜೆಪಿಯನ್ನು ನಿರ್ನಾಮ […]